Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿ ಕ್ಲಬ್ ವಾರದ ಸಭೆ – ಕುಟುಂಬ ಸಮ್ಮಿಲನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಕುಂದಾಪುರ ವಾರದ ಸಭೆ – ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತಿಚಿಗೆ ಜರುಗಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೀರಣ್ಣ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಮೆರಡಿ ಸುಖಮಯ ದಾಂಪತ್ಯ ಜೀವನದ ಬಗ್ಗೆ ಬಹಳ ಸುಂದರವಾಗಿ ಮಾತನಾಡಿದರು ಹಾಗೆ ವಿಶೇಷ ಆಹ್ವಾನಿತರಾದ ಹೆಸರಾಂತ ಹೃದ್ರೋಗ ತಜ್ಞರಾದ ಡಾ. ಜೈ ಶಂಕರ್ ಮಾರ್ಲ ಇವರು ಮುತ್ತಯ್ಯಶೆಟ್ಟಿಯವರ ಹಾಗೂ ಅವರ ಸೇವೆ ಬಗ್ಗೆ ಮಾತನಾಡಿದರು.

ಆವರ್ಶೆ ಮತ್ತಯ್ಯ ಶೆಟ್ಟಿ ಮತ್ತು ಉಷಾ ಮುತ್ತಯ್ಯ ಶೆಟ್ಟಿ ದಂಪತಿಯರಿಗೆ 50ರ ಸಂಭ್ರಮವನ್ನು ಬಹಳ ಸರಳ, ಸುಂದರವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಕುರಿತು ತಮ್ಮ ಅನುಭವವನ್ನು ಆವರ್ಶೆ ಮುತ್ತಯ್ಯ ಶೆಟ್ಟಿ ಹಂಚಿಕೊಂಡರು ಹಂಚಿಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಅಧ್ಯಕ್ಷ ನುಡಿಯನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರದ ಎಲ್ಲಾ ಸದಸ್ಯರು ಹಾಗೂ ಆನ್ಸ್ ಕ್ಲಬ್ಬಿನ ಅಧ್ಯಕ್ಷ ಸ್ಮಿತಾ ವೆಂಕಟೇಶ ಮತ್ತು ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸರಿ ಸಹಕರಿಸಿದರು. ಕಾರ್ಯದರ್ಶಿ ನಾಗರಾಜ ಶೆಟ್ಟಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು

Exit mobile version