Kundapra.com ಕುಂದಾಪ್ರ ಡಾಟ್ ಕಾಂ

ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಜೇಸಿಐ ಬೈಂದೂರು ಸಿಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜೇಸಿಐ ಜೋಡುಮಾರ್ಗ ನೇತ್ರಾವತಿ ಆತಿಥ್ಯದಲ್ಲಿ ಭಾನುವಾರ ನಡೆದ ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ ನಿಲುಮೆ 2023 ರಲ್ಲಿ ಜೇಸಿಐ ಬೈಂದೂರು ಸಿಟಿ ಅತ್ಯುತ್ತಮ ಘಟಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಘಟಕ ಅಧ್ಯಕ್ಷ ರನ್ನರ್ ಪ್ರಶಸ್ತಿ, ಓಟ್ ಸ್ಯಾಂಡಿಂಗ್ ಜೇಸಿಐ ಬೈಂದೂರು ಸಿಟಿ ರನ್ನರ್ ಪ್ರಶಸ್ತಿ, ಗೋಲ್ಡನ್ ಲೋ ಪುರಸ್ಕಾರ, ಯುವ ದಿನಾಚರಣೆ ಸಂಭ್ರಮಾಚರಣೆ ಮನ್ನಣೆ, ಪರ್ಮನೆಂಟ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕಾಗಿ ಮನ್ನಣೆ, ಯುಗಾದಿ ಸಂಭ್ರಮ ಆಚರಣೆ ಮನ್ನಣೆ, ಗಣರಾಜ್ಯೋತ್ಸವ ಸಂಭ್ರಮ ಮನ್ನಣೆ, ರಜತ ಪುರಸ್ಕಾರ ಪ್ರಶಸ್ತಿ, ಚಿತ್ರ ಪ್ರದರ್ಶನ ಪ್ರಶಸ್ತಿ ಇನ್ನೀತರ ಹವಲು ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ.

ವಲಯಾಧ್ಯಕ್ಷ ಜೇಸಿ ಪುರುಪೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ಅಭಿಲಾಷ್ ಬಿ.ಎ ಪ್ರಶಸ್ತಿಗಳನ್ನು ವಿತರಿಸಿದ್ದರು.

ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಕೆ. ನರೇಂದ್ರ ಶೇಟ್, ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್ ದೇವಾಡಿಗ, ಜೇಸಿರೆಟ್ ಅಧ್ಯಕ್ಷೆ ಗುಲಾಬಿ ಮರವಂತೆ, ಜ್ಯೂನಿಯರ್ ಜೇಸಿ ಅಧ್ಯಕ್ಷ ಹರ್ಷಿತ್ ಎನ್ ಶೇಟ್, ಸ್ಥಾಪಕ ಸದಸ್ಯ ರಾಘವೇಂದ್ರ ಹೊಳ್ಳ, ಜೊತೆ ಕಾರ್ಯದರ್ಶಿ ಕವಿತಾ ನರೇಂದ್ರ ಶೇಟ್, ಉಪಾಧ್ಯಕ್ಷರಾದ ಸಕ್ಕು ಕಲ್ಮಕ್ಕಿ, ಅನಿತಾ ಆರ್.ಕೆ ಮರವಂತೆ, ಗಣೇಶ್ ಪೂಜಾರಿ, ಸದಸ್ಯ ಸುರೇಶ್ ಶೇಟ್ ಇದ್ದರು.

Exit mobile version