Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಹರ್ಷಿತಳಿಗೆ ಕಲಾ ಕೌಸ್ತುಭ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಗಳಿಸಿದ ಕುಂದಾಪುರದ ಹರ್ಷಿತಳನ್ನು ದಾವಣೆಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಕನ್ನಡ ಕೌಸ್ತುಭ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಜುಲೈ 30 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂಭ್ರಮದ ಸಮಾರಂಭದಲ್ಲಿ ಹರ್ಷಿತಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದವರಿಗೆ ಕಲಾ ಕುಂಚ ಗೌರವಿಸುತ್ತದೆ. ಕು. ಹರ್ಷಿತ ಇವರು ದಿ. ಲೋಕೇಶ್ ರಾವ್ ಹಾಗೂ ಕುಂದಾಪುರದ ಸಿನಿಯರ್ ಸಿವಿಲ್ ಜಡ್ಜ್ನ ಶೀಘ್ರ ಲಿಪಿಗಾರರಾದ ಸುನಂದಾ ಶೆಟ್ಟಿಗಾರ ದಂಪತಿಯ ಪುತ್ರಿ.

Exit mobile version