Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ವಲಯ ಸಮ್ಮೇಳನ: ಜೆಸಿಐ ಉಪ್ಪುಂದಕ್ಕೆ ಟಾಪ್ ತ್ರೀ ಅವಾರ್ಡ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಶಂಕರನಾರಾಯಣದಲ್ಲಿ ನಡೆದ ಜೆಸಿಐ ಭಾರತ ವಲಯ 15ರ ಬೆಳವಣಿಗೆ ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಉಪ್ಪುಂದ ಪ್ರಸ್ತಕ್ತ ಸಾಲಿನ್ಲಲಿ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಅವರಿಗೆ ಬಿಸಿನೆಸ್ ವಿಭಾಗದಲ್ಲಿ ವಲಯದ ಟಾಪ್ ತ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ವಲಯ್ಯಾಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ, ಬಿಸಿನೆಸ್ ವಿಭಾಗದ ನಿರ್ದೇಶಕರಾದ ನಾಗರಾಜ್ ಪೂಜಾರಿ ನಿಕಟಪೂರ್ವ ಅಧ್ಯಕ್ಷರಾದ ರಾಯನ್ ಉದಯ್ ಕ್ರಾಸ್ತಾ, ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ಅಕ್ಷತಾ ಗಿರೀಶ್ ಉಪಾಧ್ಯಕ್ಷರಾದ ಮಂಜುನಾಥ್ ದೇವಾಡಿಗ ಪೂರ್ವ ಅಧ್ಯಕ್ಷರಾದ ಪ್ರಕಾಶ್ ಭಟ್, ಮಂಗೇಶ್ ಶ್ಯಾನುಭಾಗ್, ಸುಬ್ರಮಣ್ಯ ಜಿ, ಪುರಂದರ ಖಾರ್ವಿ, ಹಿರಿಯ ಸದಸ್ಯರಾದ ಗುರುರಾಜ್ ಹೆಬ್ಬಾರ್, ಶಿವಾನಂದ ಗಾಣಿಗ ಜೇಸಿರೇಟ್ ಅಧ್ಯಕ್ಷರಾದ ರೇಖಾ ಜೆಜೆಸಿ ಅಧ್ಯಕ್ಷರಾದ ನಿಶಾ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Exit mobile version