ಕುಂದಾಪುರ: ರೋಟರ್ಯಾಕ್ಟ್ ಕ್ಲಬ್ ಕುಂದಾಪುರ ವೆಲ್ಫೇರ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಜಿನಿಯರ್ ಕಿಶೋರ್ ಕೊಡಮಾಡಿದ ವೀಲ್ ಚೇರ್ನ್ನು ವೆಂಕಟರಮಣ ಆಚಾರ್ಯ ಅವರಿಗೆ ಹಾಗೂ ವಾಟರ್ ಪ್ಯೂರಿಫಯರ್ನ್ನು ಕೋಣಿಯ ಮಾನಸ ಜ್ಯೋತಿ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಭಾರತೀಯ ಜೀವವಿಮಾ ಪ್ರತಿನಿಧಿ ಶಂಕರ ಐತಾಳ್, ರೋಟರ್ಯಾಕ್ಟ್ ಕ್ಲಬ್ ಕುಂದಾಪುರ ಪೂರ್ವಾಧ್ಯಕ್ಷರಾದ ಪ್ರವೀಣ ಕುಮಾರ್ ಟಿ, ಎಚ್. ಎಸ್. ಹತ್ವಾರ್, ಶ್ರೀಧರ ಸುವರ್ಣ, ಕಿಶೋರ್, ದಾಮೋದರ ಪೈ ಉಪಸ್ಥಿತರಿದ್ದರು.