Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಕ್ಲೀನ್ ಕಿನಾರ ಅಭಿಯಾನದ 25ನೇ ಆವೃತ್ತಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮೃದ್ಧ ಬೈಂದೂರು – ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಆಯೋಜಿಸಲಾದ 25ನೇ ಆವೃತ್ತಿಯ ಕ್ಲೀನ್ ಕಿನಾರ ಕಾರ್ಯಕ್ರಮವನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ ಕ್ಷೇತ್ರದ ಸಮುದ್ರ ತೀರಗಳ ಸ್ವಚ್ಛತೆಗಾಗಿ ಕ್ಲೀನ್ ಕಿನಾರ ಕಾರ್ಯಕ್ರಮವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ತಂಡದ ಪರಿಶ್ರಮ ಮತ್ತು ಅವರು ಕೈಗೊಂಡ ಸಂಕಲ್ಪವನ್ನು ಶ್ಲಾಘಿಸಿದರಲ್ಲದೇ ಸ್ವಚ್ಛ ಬೈಂದೂರು ಕಾರ್ಯಕ್ರಮದ ಮೂಲಕ ಇಡೀ ಊರು, ವಿವಿಧ ಸಂಸ್ಥೆಗಳು, ಯುವಕರು, ಎಲ್ಲರೂ ಸೇರಿ ನಮ್ಮ ಬೈಂದೂರು ಕ್ಷೇತ್ರವನ್ನು ಸ್ವಚ್ಛ, ಸುಂದರವನ್ನಾಗಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹರೀಶ್ ವಿ. ಕೋಟ್ಯಾನ್ ಉಪಸ್ಥಿತರಿದ್ದರು. ಉದ್ಘಾಟನೆ ವೇಳೆ ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ, ತಾಪಂ ಮಾಜಿ ಸದಸ್ಯ ಪುಪ್ಪರಾಜ ಶೆಟ್ಟಿ, ಉದ್ಯಮಿ ಬಿ.ಎಸ್. ಸುರೇಶ್ ಶೆಟ್ಟಿ, ರಾ‍ಘವೇಂದ್ರ ಸುರಭಿ, ಸದಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ತಾಲೂಕು ಸೌಧದಿಂದ ಸೋಮೇಶ್ವರ ಬೀಚ್ವರೆಗೆ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನ ಹಾಗೂ ಜಾಥಾ ಹಮ್ಮಿಕೊಳ್ಳಲಾಯಿತು.

Exit mobile version