Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು ಕಂಬಳ: 6.5 ಕೋಲು ನಿಶಾನೆಗೆ ನೀರು ಹಾಯಿಸಿದ ಬೊಳಂಬಳ್ಳಿಯ ಕೋಣಗಳಿಗೆ ಚಿನ್ನದ ಪದಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಕರಾವಳಿಯ ಕಂಬಳದಲ್ಲಿ ಬೈಂದೂರು ಬೊಳಂಬಳ್ಳಿಯ ಶ್ರೀರಾಮ್ ಚೈತ್ರ ಪರಮೇಶ್ವರ್ ಭಟ್ ಅವರ ಕಾಂತಾರ ಖ್ಯಾತಿಯ ಕೋಣಗಳು ಚಿನ್ನದ ಪದಕ ಪಡೆದುಕೊಂಡಿವೆ.

ಬೆಂಗಳೂರು ಕಂಬಳದ ಕನೆಹಲಗೆ ವಿಭಾಗದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿರುವ ಕೋಣಗಳು ಚಿನ್ನದ ಪದಕವನ್ನು ಪಡೆದಿವೆ. ಕೋಣಗಳನ್ನು ಗಣೇಶ್ ಉಳ್ಳೂರು ಓಡಿಸಿದ್ದರು. ಅಪ್ಪು ಹಾಗೂ ಕಿಟ್ಟು ಹೆಸರಿನ ಈ ಕೋಣಗಳನ್ನು ಕಾಂತಾರ ಸಿನಿಮಾದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಓಡಿಸಿದ್ದರು.

Exit mobile version