Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ : ಸಾಮೂಹಿಕ ಸತ್ಯನಾರಾಯಣ ಪೂಜೆ

ಗಂಗೊಳ್ಳಿ: ಇಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ (ರಿ),ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹನ್ನೊಂದನೆ ವರುಷದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ‍್ಯಕ್ರಮವು ಇತ್ತೀಚೆಗೆ ಮೇಲ್ ಗಂಗೊಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ನಡೆಯಿತು. ಮಂಕಿ ಗುಜ್ಜಾಡಿಯ ಕೃಷ್ಣಮೂರ್ತಿ ಭಟ್ ಮತ್ತು ಶ್ರೀಧರ ಭಟ್ ಇವರುಗಳು ಪೌರೋಹಿತ್ಯ ವಹಿಸಿದ್ದರು. ಸ್ಥಳೀಯ ಭಕ್ತಾಧಿಗಳಿಂದ 26 ಕಲಶ ಪೂಜೆ ನಡೆಯಿತು.

ವರದಿ : ನರೇಂದ್ರ ಎಸ್ ಗಂಗೊಳ್ಳಿ

Exit mobile version