Kundapra.com ಕುಂದಾಪ್ರ ಡಾಟ್ ಕಾಂ

ಸಂಗೀತ ಕ್ಷೇತ್ರದ ಸಾಧಕ ಅನುರಾಗ್ ನಾಯಕ್‌ಗೆ ಬಾಲಜ್ಞಾನಶ್ರೀ ಪುರಸ್ಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕನ್ನಡ ನಾಡು-ನುಡಿ. ನೆಲ-ಜಲ ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಇತ್ತಿಚಿಗೆ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಸಂಗೀತ ಕ್ಷೇತ್ರದ ಸಾಧಕ ಅನುರಾಗ್ ನಾಯಕ್ ನಾಗರಮಠ ಇವರಿಗೆ ರಾಜ್ಯಮಟ್ಟದ ಬಾಲಜ್ಞಾನಶ್ರೀ ಪುರಸ್ಕಾರ ಪ್ರದಾನಿಸಲಾಯಿತು.

ಅನುರಾಗ್ ಇವರು ಪ್ರಸ್ತುತ ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಉದ್ಯಮಿ ರಘುನಂದನ ನಾಯಕ್ ಹಾಗೂ ಅಂಜಲಿ ನಾಯಕ್ ಇವರ ಪುತ್ರ.

Exit mobile version