Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಜಾನುವಾರು ಸಾಗಾಟ: ಎತ್ತು ಮತ್ತು ವಾಹನ ವಶಪಡಿಸಿಕೊಂಡ ಪೊಲೀಸರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಬೈಂದೂರು ಪೊಲೀಸರು ಎತ್ತು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಸೋಮವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಬೈಂದೂರು ಎಸೈ ತಿಮ್ಮೇಶ್.ಬಿ.ಎನ್, ಗಸ್ತಿನಲ್ಲಿದ್ದಾಗ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳು ಟಾಟಾ ಎಸ್ ವಾಹನದಲ್ಲಿ ಜಾನುವಾರನ್ನು ತುಂಬಿಕೊಂಡು ಶಿರೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದರು. ಶಿರೂರು ಕೆಳಪೇಟೆ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ವಾಹನವನ್ನು ತಡೆಯಲಾಯಿತು.

ಟಾಟಾ ಏಸ್ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಟಾಟಾ ಎಸ್ ವಾಹನವನ್ನು ಜೀಪಿನಲ್ಲಿ ಬೆನ್ನಟ್ಟಿ ಕೊಂಡು ಹೋಗಿ ಮೊಮಿನ್ ಮೊಹಲ್ಲಾ ಬಳಿ ತಡೆದು ನಿಲ್ಲಿಸಿದಾಗ ಟಾಟಾ ಎಸ್ ವಾಹನದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಾಹನದ ಹಿಂಬದಿಯಲ್ಲಿ ಒಂದು ಎತ್ತನ್ನು ಹಿಂಸಾತ್ಮಕವಾಗಿ ಹಳದಿ ನೈಲಾನ್ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿತುಂಬಲಾಗಿತ್ತು. ಬಿರುವುದು ಕಂಡು ಬಂದಿರುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದ ಎತ್ತಾಗಿರುತ್ತದೆ.ಅದರ ಅಂದಾಜು ಮೌಲ್ಯ 10 ಸಾವಿರವಾಗಿದ್ದು, 3 ಲಕ್ಷ ಮೌಕ್ಯದ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

Exit mobile version