Kundapra.com ಕುಂದಾಪ್ರ ಡಾಟ್ ಕಾಂ

ಯುಎಇ: ಕುಂದಾಪುರದ ವಿವಿಧ ಸಂಘಟನೆಗಳಿಂದ ಶಾಸಕ ಗುರುರಾಜ ಗಂಟಿಹೊಳೆ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಶಿಯೇಷನ್‌ ಹಾಗೂ ಕುಂದಾಪುರ ದೇವಾಡಿಗ ಮಿತ್ರ ದುಬೈ ಜಂಟಿಯಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಭೇಟಿ ಹಾಗೂ ಕಾರ್ಯಕ್ರಮಕ್ಕಾಗಿ ದುಬೈ ಪ್ರವಾಸ ಕೈಗೊಂಡಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರುಗಳಾದ ರಾಮೀ ಗ್ರೂಪ್‌ನ ವರದರಾಜ ಶೆಟ್ಟಿ, ಫಾರ್ಚೂನ್‌ ಗ್ರೂಪ್‌ನ ವಕ್ವಾಡಿ ಪ್ರವೀಣಕುಮಾರ್‌ ಶೆಟ್ಟಿ, ಶಿರೂರು ಅಸೋಸಿಯೇಷನ್‌ ಪ್ರಧಾನ ಪೋಷಕ ಮಣೆಗಾರ್‌ ಮೀರಾನ್‌ ಸಾಹೇಬ್‌, ಕದಂ ರೂವಾರಿ, ಎಲಿಗೆಂಟ್‌ ಗ್ರೂಪ್‌ ಎಂಡಿ ದಿನೇಶ್‌ ದೇವಾಡಿಗ ನಾಗೂರು, ಕುಂದಾಪ್ರ ಕನ್ನಡ ಬಳಗ ಗಲ್ಫ್‌ ಅಧ್ಯಕ್ಷರಾದ ಸದನ್‌ ದಾಸ್‌, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಬೈಂದೂರಿನ ಉದ್ಯಮಿಗಳಾದ ಕೆ. ವೆಂಕಟೇಶ್ ಕಿಣಿ, ಬಿ.ಎಸ್. ಸುರೇಶ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶಿರೂರು ಮೊದಲಾದವರು ಉಪಸ್ಥಿತರಿದ್ದರು.

Exit mobile version