Kundapra.com ಕುಂದಾಪ್ರ ಡಾಟ್ ಕಾಂ

ಹಂಗಳೂರು ಹುಚ್ಕೇರಿ ಯುವಕ ಪ್ರದೀಪ್ ಆತ್ಮಹತ್ಯೆಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ವೈಯಕ್ತಿಕ ಕಾರಣಗಳಿಂದ ಹತಾಶನಾದ ಯುವಕನೊರ್ವ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಕುಂದಾಪುರದ ಹಂಗಳೂರಿನಲ್ಲಿ ನಡೆದಿದೆ. ಹಂಗಳೂರು ಹುಚ್ಕೇರಿ ನಿವಾಸಿ ಸರೋಜಿನ ಸರ್ಸಿಂಗ್ ಹೋಂ ರಸ್ತೆಯ ಪ್ರದೀಪ (22) ಮೃತ ಯುವಕ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಡಿಪ್ಲೊಮಾ ಇಂಜಿನಿಯರ್ ಪದವಿಧರನಾದ ಪ್ರದೀಪ್ ಮಣಿಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ. ರಾತ್ರಿಪಾಳಿ ಕೆಲಸವಾದುದರಿಂದ ಹಗಲಿಗೆ ಮನೆಯಲ್ಲಿ ಮಲಗುತ್ತಿದ್ದ. ಮಧ್ಯಾಹ್ನ 2ಗಂಟೆಯ ವೇಳೆಗೆ ಆತನ ತಂದೆ ಉಟ ಮಾಡುವಂತೆ ಆತನನ್ನು ಎಬ್ಬಿಸಿದ್ದರೂ, ಊಟ ಮಾಡದೇ ಹಾಗೆಯೇ ಮಲಗಿದ್ದವ 3ಗಂಟೆಯ ಸುಮಾರಿಗೆ ಬಾಗಿಲು ಚಿಲಕ ಹಾಕಿಕೊಂಡಿದ್ದ ಎನ್ನಲಾಗಿದೆ. ಸಂಜೆ ಕೆಲಸಕ್ಕೆ ತೆರಳುವ ಸಮಯವಾದರೂ ಹೊರಕ್ಕೆ ಬಾರದಿದ್ದುದನ್ನು ಗಮನಿಸಿದ ತಂದೆ ಬಾಗಿ ತಟ್ಟಿದಾಗ ತೆರೆದ್ದಿದ್ದುದರಿಂದ ಅನುಮಾನಗೊಂ ಅವರು ಕಿಟಕಿಯಲ್ಲಿ ಇಣಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರೇಮ ವೈಪಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದ್ದು ಈ ಬಗ್ಗೆ ತನಿಕೆ ನಡೆಯುತ್ತಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version