Kundapra.com ಕುಂದಾಪ್ರ ಡಾಟ್ ಕಾಂ

ಲಯನ್ಸ್ ವಲಯಧ್ಯಕ್ಷರಾಗಿ ಗಿರೀಶ್ ಶ್ಯಾನುಭಾಗ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
‌ಲಯನ್ಸ್ 317ಸಿ, ಪ್ರಾಂತ್ಯ 6ರ 2024-25ನೇ ಸಾಲಿನ ವಲಯಧ್ಯಕ್ಷರಾಗಿ ಗಿರೀಶ್ ಶ್ಯಾನುಭಾಗ್ ಆಯ್ಕೆಯಾಗಿದ್ದಾರೆ.

ಗಿರೀಶ್‌ ಶ್ಯಾನುಭಾಗ್‌ ಅವರು ಲಯನ್ಸ್ ಕ್ಲಬ್‍ ಬೈಂದೂರು ಉಪ್ಪುಂದದ 2023-24ರ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಜೆಸಿಐ ಉಪ್ಪುಂದದ ಅಧ್ಯಕ್ಷರಾಗಿ, ವಲಯ ತರಬೇತುದಾರರಾಗಿ, ಸೀನಿಯರ್ ಚೇಂಬರ್‌ ಇಂಟರನ್ಯಾಶ್‍ನಲ್‍ ಉಪ್ಪುಂದ ಲೀಜನ್‍ನ ಅಧ್ಯಕ್ಷರಾಗಿ ಪ್ರಸ್ತುತ ರಾಷ್ಟ್ರೀಯ ಸಂಯೋಜಕರಾಗಿ, ಉಪ್ಪುಂದ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಕರಾಗಿದ್ದ ಶ್ಯಾನುಭಾಗ್‌ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಅಕ್ಷರಸಿರಿ ಪ್ರಶಸ್ತಿ ಪಡೆದಿದ್ದು, ಪ್ರಸ್ತುತ ನಿವೃತ್ತರಾಗಿದ್ದಾರೆ.

Exit mobile version