Site icon Kundapra.com ಕುಂದಾಪ್ರ ಡಾಟ್ ಕಾಂ

ಸಮಗ್ರ ಶಿಕ್ಷಣ ಯೋಜನೆ ಸಾಮಾಜಿಕ ಪರಿಶೋಧನಾ ತಂಡ ತಗ್ಗರ್ಸೆ ಶಾಲೆಗೆ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಮಗ್ರ ಶಿಕ್ಷಣ ಯೋಜನೆ ಕರ್ನಾಟಕ, ಸಾಮಾಜಿಕ ಪರಿಶೋಧನ ತಂಡವು  ಶಾಲೆಗೆ ಭೇಟಿ ನೀಡಿ ಸಮಗ್ರ ಮೌಲ್ಯಮಾಪನ ನಡೆಸಿ  ಪಾಲಕರೊಂದಿಗೆ ಹಾಗೂ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು .

ತಾಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾಗಿರುವ ಸುರೇಶ್ ಅಧ್ಯಕ್ಷತೆ ವಹಿಸಿದರು, ಯೋಜನೆಯ  ತಾಲೂಕು ವ್ಯವಸ್ಥಾಪಕರಾಗಿರುವ ಸುಕುಮಾರ್.  ಬಿ.  ಪ್ರಾಸ್ತಾವಿಕ ನುಡಿಗಳನ್ನಾಡಿದರು . ಮುಖ್ಯ ಶಿಕ್ಷಕರಾದ ಮುಕ್ತ ಪಿ. ವರದಿ ಮಂಡಿಸಿದರು.

ಶಾಲಾಭಿವೃದ್ಧಿ ಕುರಿತಾಗಿ ಎಸ್‍ಡಿಎಮ್‍ಸಿ, ಪಾಲಕರು  ಮತ್ತು  ಹಳೆ ವಿದ್ಯಾರ್ಥಿಗಳಿಂದ ಅಹವಾಲು, ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ,  ಎಸ್. ಡಿ. ಎಂ. ಸಿ. ಅಧ್ಯಕ್ಷರಾಗಿರುವ ಸುಬ್ರಹ್ಮಣ್ಯ ಪೂಜಾರಿ, ಎಸ್. ಡಿ. ಎಂ. ಸಿ. ಉಪಾಧ್ಯಕ್ಷೆ ನಾಗವೇಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಮಂಜುನಾಥ ಪೂಜಾರಿ, ಕೋಶಾಧಿಕಾರಿ ಮಹಾದೇವ ಬಿಲ್ಲವ, ಕಾರ್ಯದರ್ಶಿ ಸುಧಾಕರ್ ಮೊಗವೀರ, ಮತ್ತು ಎಸ್. ಡಿ. ಎಂ. ಸಿ. ಸದಸ್ಯರು, ಪಾಲಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸಹ ಶಿಕ್ಷಕರಾದ  ಮಾಲತಿ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತಾ ವಂದಿಸಿದರು. ಸಹ ಶಿಕ್ಷಕಿ ಸಾರಿಕಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version