Kundapra.com ಕುಂದಾಪ್ರ ಡಾಟ್ ಕಾಂ

ವತ್ತಿನಣೆ: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಗರ್ಭಗೃಹಕ್ಕೆ ಶಿಲನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ (ಕಿರು ಮಂತ್ರಾಲಯ) ಶ್ರೀ ಗುರು ಸಾರ್ವಭೌಮರ ನೂತನ ಶಿಲಾಮಯ ಗರ್ಭಗೃಹಕ್ಕೆ ಗುರುವಾರ ಶಿಲಾನ್ಯಾಸ ಮಾಡಲಾಯಿತು.

ವೇದಮೂರ್ತಿ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಹಾಗೂ ಮಠದ ಪ್ರಧಾನ ಅರ್ಚಕರಾದ ಸುಬ್ರಾಯ ನಾವಡ ಇವರ ನೇತೃತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸೂಲ್ಯಣ್ಣ ಶೆಟ್ಟಿ, ಸದಸ್ಯರಾದ ಎಸ್‌. ರಾಜು ಪೂಜಾರಿ, ಮಂಜುನಾಥ ಶೆಟ್ಟಿ, ದಿನೇಶ್, ರವೀಂದ್ರ ಶ್ಯಾನುಭಾಗ್‌, ಗಿರೀಶ್ ಶೇಟ್‌, ರಾಜು ದೇವಾಡಿಗ, ಮಂಜುನಾಥ ಸೆಳಾಕುಳ್ಳಿ, ಜಗನ್ನಾಥ ಶೆಟ್ಟಿ, ಮಹೇಶ್ ಮೊಗೇ‌ರ್ ಕರಾವಳಿ, ದಿನಕರ ಶೆಟ್ಟಿ, ಅಣ್ಣಪ್ಪ ಪೂಜಾರಿ, ಶಿಲ್ಪಿಗಳಾದ ಗುರು ಭಟ್ಕಳ, ಅರ್ಚಕರಾದ ಮುರುಳಿ ನಾವಡ, ತಿರುಮಲ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Exit mobile version