Kundapra.com ಕುಂದಾಪ್ರ ಡಾಟ್ ಕಾಂ

ಬಸ್ಸಿನಲ್ಲಿ ಚಿನ್ನದ ಕರಿಮಣಿ ಸರ ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಹಾರ ಸರಬರಾಜು ಇಲಾಖೆಯಲ್ಲಿ ಖಾಸಗಿಯಾಗಿ ಕೆಲಸ ಮಾಡಿಕೊಂಡಿರುವ ಸಾಕು ಕುಂದಬಾರಂದಾಡಿ ಎಂಬವರ ಕುತ್ತಿಗೆಯಿಂದ ಕರಿಮಣಿ ಸರ ಯಾರೋ ಕಳವು ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟು ಮುಳ್ಳಿಕಟ್ಟೆಯಲ್ಲಿ ಖಾಸಗಿ ಬಸನ್ನೇರಿ ಕುಂದಾಪುರ ಶಾಸ್ತ್ರೀ ಸರ್ಕಲ್‍ನಲ್ಲಿ ಇಳಿದಿದ್ದು ಕುತ್ತಿಗೆ ನೋಡುವಾಗ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಇಲ್ಲವಾಗಿತ್ತು.

ಬಸ್‌ನಲ್ಲಿ ಪಯಣಿಸುತ್ತಿರುವ ಹೊತ್ತಲ್ಲಿ ಯಾರೊ ಕಳ್ಳರು ಕಳವು ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದು ಕಳವಾದ ಸೊತ್ತಿನ ಮೌಲ್ಯ 1.20 ಲಕ್ಷ ರೂ. ಎಂದು ತಿಳಿಸಿದರು.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version