ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿನೋದ್ಕುಮಾರ್ ಪಿ. ಇವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ, ಶಯದೇವಿಸುತೆ ಮರವಂತೆ (ಜ್ಯೋತಿ ಜೀವನ್ಸ್ವರೂಪ್)ಅವರ ಹೊಸ ಮಹಾ ಕಾದಂಬರಿ, “ಕೆಂದಾವರೆ” ಕಾದಂಬರಿಯನ್ನು ಬೆಳ್ಳಿ ತೆರೆಗೆ ಬರಲು ಸಿದ್ದತೆ ನಡೆದಿದೆ.
“ಕೆಂದಾವರೆ” ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಲೋಕಾರ್ಪಣೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.
ಹುಬ್ಬಳ್ಳಿ, ಬೆಂಗಳೂರು, ಮಲೆನಾಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರೀಕರಣವು ಆರಂಭಗೊಂಡಿದ್ದು, ಚಿತ್ರ ನಿರ್ದೇಶಕ ಪನ್ನಗ ಹಾಗೂ ಕಲಾವಿದ ಜಗನ್ರವರು ಕೆಲ ಆ್ಕಕ್ಷನ್ ಕಟ್ ಹಾಗೂ ಕಾಮಿಡಿ ಪಂಚ್ನಲ್ಲಿ ಸಹ ಬರಹಗಾರರಾಗಿ ಇವರಿಗೆ ಬಲು ವಿಶೇಷವಾಗಿ ಕೈಜೋಡಿಸಿರುತ್ತಾರೆ.