ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಅನುಭವಿಸುವುದು ಇತರರಿಗೆ ಹೇಳುವುದು ನಮ್ಮ ಜವಾಬ್ದಾರಿ ಎನ್ನುವುದನ್ನು ಮರೆತುಬಿಟ್ಟೆದ್ದೇವೊ ಅನ್ನುವಷ್ಟರ ಮಟ್ಟಿಗೆ ಇತಿಹಾಸದ ನೆನಪುಗಳು ನಮ್ಮಿಂದ ದೂರವಾಗುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ & ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ಹಾಗೂ ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದೊಂದಿಗೆ ನಡೆದ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾದ 3 ದಿನಗಳ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನದ ಉದ್ಘಾಟಿಸಿ ಮಾತನಾಡಿದರು.
ನಮ್ಮ ಐತಿಹಾಸಿಕ ದಾಖಲೆಗಳು ಪರಂಪರೆ, ಸಂಸ್ಕೃತಿ ಮತ್ತು ವಾಸ್ತು ಶಿಲ್ಪಗಳ ಮಹತ್ವವನ್ನು ಕುರಿತು ವಿಶೇಷ ಅಧ್ಯಯನಗಳ ಅವಶ್ಯಕತೆ ಇದೆ. ಇತಿಹಾಸವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಅರಿತು ಆ ನೆಲೆಯಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.

35ನೇ ವಾರ್ಷಿಕ ಮಹಾಅಧೀವೆಶೇನದ ಸರ್ವಾಧ್ಯಕ್ಷತೆಯನ್ನು ಮಂಗಳೂರು ಹಾಗೂ ದೆಹಲಿ ವಿಶ್ವವಿದ್ಯಾನಿಲಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೇಶವನ್ ವೇಳುತಾಟ್ ಅವರು ಮಾತನಾಡಿ, ದೇಶದಲ್ಲಿ ಪ್ರಾದೇಶಿಕ ನೆಲೆಯ ಐತಿಹಾಸಿಕ ನೆಲೆಯ ವೈಶಿಷ್ಟ್ಯತೆಯನ್ನು ಹೊಂದಿದೆ. ಇದು ಸ್ವಾತಂತ್ರ್ಯದ ನಂತರದ ಕಡ್ಡಾಯ ಎಂದು ಹೇಳುವುದು ಸತ್ಯ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಾದೇಶಿಕ ಇತಿಹಾಸದ ಇತಿಹಾಸವು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಗಮನಿಸಬೇಕು. ಭಾರತೀಯ ಇತಿಹಾಸಕಾರರು 19ನೇ ಮತ್ತು 20ನೇ ಶತಮಾನದ ಆರಂಭದ ಸಾಮ್ರಾಜ್ಯಶಾಹಿ ಬರಹಗಳಿಗೆ ಪ್ರತಿಕ್ರಿಯೆಯಾಗಿ ಸ್ಪಷ್ಟವಾದ ರಾಷ್ಟ್ರೀಯವಾದಿ ಪೂರ್ವಾಗ್ರಹಗಳೊಂದಿಗೆ ಇತಿಹಾಸವನ್ನು ಬರೆದಾಗ, ಅವರು ತಮ್ಮ ಬರಹಗಳಿಗೆ ಪೂರಕವಾಗಿ ಪ್ರದೇಶಗಳ ಇತಿಹಾಸವನ್ನು ಸಹ ಬರೆದರು. ರಾಷ್ಟ್ರೀಯತೆಯನ್ನು ಗಮನದಲ್ಲಿರಿಸಿಕೊಂಡು ಬೇರೆ ಬೇರೆ ಪ್ರದೇಶಗಳ ಇತಿಹಾಸದ ಬಗ್ಗೆ ಮುತುವರ್ಜಿ ವಹಿಸಿದ್ದರು ಎಂಬುದನ್ನು ಅವರು ಬರವಣಿಗೆಯಲ್ಲಿ ನೋಡುತ್ತೇವೆ. ನಿಜ, ಈ ಬರಹಗಳಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಎರಡರಲ್ಲೂ ಒಂದು ಅರ್ಥವನ್ನು ಬೆಳೆಸುವಲ್ಲಿ ಇದು ಹೇಗೆ ಬೆಳೆದಿದೆ ಮತ್ತು ಸಹಾಯಕವಾಗಿದೆ ಎಂಬುದನ್ನು ಗಮನಿಸುತ್ತೇವೆ.
“ಭಾರತೀಯ ಇತಿಹಾಸದಲ್ಲಿ ಪ್ರದೇಶಗಳು ಯಾವಾಗ ಪ್ರಬುದ್ಧತೆಯನ್ನು ತಲುಪುತ್ತವೆ?” ಎಂಬ ಪ್ರಶ್ನೆ. ಭಾರತೀಯ ಇತಿಹಾಸಲೇಖನದಲ್ಲಿ ಒಂದು ಫ್ಯಾಷನ್ ಇತ್ತು, ಅದು ಬಿಲಿಯರ್ಡ್ಸ್ ಮಾದರಿಯಲ್ಲಿ ನಂಬಿಕೆ ಇಟ್ಟಂತೆ ತೋರುತ್ತಿತ್ತು. ಅದರಂತೆ, ಮೌರ್ಯ ಸಾಮ್ರಾಜ್ಯ ಅಥವಾ ಗುಪ್ತ ಸಾಮ್ರಾಜ್ಯ ಅಥವಾ ಮೊಘಲ್ ಸಾಮ್ರಾಜ್ಯದ ಅಡಿಯಲ್ಲಿ ಎಲ್ಲವೂ ಒಮ್ಮೆ ಕೇಂದ್ರೀಕೃತವಾಗಿದ್ದವು. ಪ್ರದೇಶಗಳು ಆಯಾ ಪ್ರದೇಶವಾರು ತಮ್ಮ ಸ್ಥಾನಗಳನ್ನು ಪಡೆದುಕೊಂಡವು. ಪರ್ಯಾಯ ದೃಷ್ಟಿಕೋನದ ನೆಲೆಯಲ್ಲಿ ನೋಡುವುದಾದರೆ ಪ್ರದೇಶಗಳ ಬೆಳವಣಿಗೆಯ ಪ್ರಕ್ರಿಯೆಯನ್ನು ಸೂಯಿ ಜನರಿಸ್ ಎಂದು ನೋಡುವುದು. ಇತ್ತೀಚಿನ ವರ್ಷಗಳಲ್ಲಿ ಮನವೊಪ್ಪಿಸುವ ವಾದಗಳಲ್ಲಿ ಒಂದು ಪ್ರದೇಶಗಳ ಹೊರಹೊಮ್ಮುವಿಕೆಯನ್ನು ಅದರ ಎಲ್ಲಾ ವ್ಯಾಖ್ಯಾನಿಸುವ ವೈಶಿಷ್ಟ್ಯಗಳೊಂದಿಗೆ ಭಾರತೀಯ ಇತಿಹಾಸದ ಆರಂಭಿಕ ಮಧ್ಯಕಾಲೀನ ಹಂತದೊಂದಿಗೆ ಜೋಡಿಸುವುದು. ಆರ್ಥಿಕತೆ, ಸಮಾಜ, ರಾಜಕೀಯ, ಭಾಷೆ, ಸಾಹಿತ್ಯ, ಕಲಾತ್ಮಕ ಶೈಲಿ, ಶಿಲ್ಪಕಲೆ, ವಾಸ್ತುಶಿಲ್ಪ – ಬಹುತೇಕ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರದೇಶಗಳು ಸಾಮಾನ್ಯ ಯುಗದ ಮೊದಲ ಸಹಸ್ರಮಾನದ ದ್ವಿತೀಯಾರ್ಧದಲ್ಲಿ ಸರಿಸುಮಾರು ಪ್ರಬುದ್ಧತೆಯನ್ನು ತಲುಪಲು ಪ್ರಾರಂಭಿಸುತ್ತವೆ, ಇಲ್ಲಿ ಅಥವಾ ಅಲ್ಲಿ ಒಂದೆರಡು ಶತಮಾನಗಳನ್ನು ನೀಡುತ್ತವೆ ಅಥವಾ ತೆಗೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಭಾರತದ ವಿದ್ವಾಂಸರು ಮಹತ್ವದ ಕೆಲಸವು ಈ ಬದಲಾದ ದೃಷ್ಟಿಕೋನಕ್ಕೆ ಗಣನೀಯವಾಗಿ ಕೊಡುಗೆ ನೀಡಿದೆ ಎಂದು ಹೇಳಿದರು.
ಇಲ್ಲಿ ಪ್ರಶ್ನೆ, ಅಂದರೆ, “ಪ್ರದೇಶದಿಂದ ನಾವು ನಿಖರವಾಗಿ ಏನು ಅರ್ಥೈಸುತ್ತೇವೆ?” ಆಯಾ ಭಾಗಗಳು ತಮ್ಮ ವೈಶಿಷ್ಟ್ಯಗಳಲ್ಲಿ ಬದಲಾಗುತ್ತವೆ ಅದಕ್ಕೆ ತಕ್ಕಂತೆ ಆಯಾ ಪ್ರದೇಶದ ಐತಿಹಾಸಿಕ ಪ್ರದೇಶಗಳ ಅಧ್ಯಯನದಲ್ಲಿ ಗಾತ್ರ, ಗಡಿ, ಘಟಕಗಳು ಮತ್ತು ಹೀಗೆ ಹತ್ತು ಹಲವು ಸಂಗತಿಗಳಿವೆ ಮತ್ತು ಅವು ವಿಭಿನ್ನ ನೆಲೆಗಳನ್ನು ಹೊಂದಿವೆ.ನನ್ನ ಸ್ವಂತ ತವರು ರಾಜ್ಯವಾದ ಕೇರಳದ ಉದಾಹರಣೆಯನ್ನು ತೆಗೆದುಕೊಳ್ಳಲು, ಇತಿಹಾಸದಲ್ಲಿ ಕೇರಳವನ್ನು ಮೂರು ರೀತಿಯಲ್ಲಿ ನಿರ್ಮಿಸಲಾಗಿದೆ. ಅಲ್ಲಿನ ಸಂಸ್ಕೃತಿ ಸಾಮಾಜಿಕ ಐತಿಹಾಸಿಕ ಅಂಶಗಳಲ್ಲಿ ವಿಭಿನ್ನ ಎಂದು ತಿಳಿಯಬಹುದು. ಹಾಗೆ ಕರ್ನಾಟಕದ ಇತಿಹಾಸವನ್ನು ಭಿನ್ನ ರೀತಿಯಲ್ಲಿ ತಿಳಿಯಬಹುದಾಗಿದೆ. ಒಟ್ಟಿನಲ್ಲಿ ಇತಿಹಾಸವು ಹಲವು ಸಂಗತಿಗಳಿವೆ ಸ್ಥಿತ್ಯಂತರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಡಾ. ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿಯನ್ನು ಆರ್. ಎಮ್. ಶಡಕ್ಷರಿ ಹಾಗೂ ವಾಸುದೇವ್ ಬಡಾಗೆರೆ, ಡಾ. ಬಿ. ಶೇಕ್ ಅಲಿ ಪ್ರಶಸ್ತಿಯನ್ನು ಡಾ. ಎಸ್.ಕೆ. ಅರುಣಿ ಅವರಿಗೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ತಾರಾ ಅವರಿಗೆ, ಒನಕೆ ಓಬವ್ವ ಪ್ರಶಸ್ತಿಯನ್ನು ಆರ್. ಕಾವಲಮ್ಮ, ಕುಂದಣ ಪ್ರಶಸ್ತಿಯನ್ನು ಡಾ. ಮುಸ್ತಕ್ ಆಹಮದ್ದ್ ಇನಾಮ್ದರ್ ಅವರಿಗೆ, ಹಾಗೂ ವಿನಯ್ ಕುಮಾರ್ ಅವರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ಪ್ರದಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಭಂಡರ್ಕಾರ್ಸ್ ಕಾಲೇಜಿನ ಮಾನ್ಯ ಹಿರಿಯ ವಿಶ್ವಸ್ಥರಾದ ಕೆ. ಶಾಂತರಾಮ ಪ್ರಭು ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ್ ಪ್ರಸಾದ್, ಎ.ಎಸ್ಐ ಧಾರವಾಡ ವಲಯದ ಅಧೀಕ್ಷಕ ಪುರಾತತ್ವಜ್ಞರಾದ ರಮೇಶ್ ಮೂಲಿಮನಿ, ಬೆಂಗಳೂರು ವಲಯದ ಬಿಪಿನ್ ಚಂದ್ರ, ಕರ್ನಾಟಕ ಇತಿಹಾಸ ಪರಿಷತ್ತು ಉಪಾಧ್ಯಕ್ಷೆ ಪ್ರೊ.ಎಸ್. ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಡಾ.ಈರಣ್ಣ ಪತ್ತಾರ, ಜಂಟಿ ಕಾರ್ಯದರ್ಶಿ, ಡಾ.ವಾಸುದೇವ ಬಡಿಗೇರ, ಡಾ.ಟಿ.ಶ್ರೀನಿವಾಸ ರೆಡ್ಡಿ ನೇಗಿ, ಖಜಾಂಚಿ ಡಾ.ಎನ್.ವಿ.ಅಸ್ಕಿ, ಜಂಟಿ ಕಾರ್ಯದರ್ಶಿ ಉಪಸ್ಥಿತರಿದ್ದರು.
ನಿಕಟ ಪೂರ್ವ ಸರ್ವಾಧ್ಯಕ್ಷ ಮಾನ್ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಅಶ್ವತ್ ನಾರಾಯಣ ಅವರು ಕರ್ನಾಟಕ ಇತಿಹಾಸ ಪರಿಷತ್ತು 34ನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಸಂಪಾದಕರಿಗೆ ಹಸ್ತಾಂತರಿಸಿದರು. ಕರ್ನಾಟಕ ಇತಿಹಾಸ ಪರಿಷತ್ತು 34ನೇ ಅಧಿವೇಶನದ ಸರ್ವಾಧ್ಯಕ್ಷರಾದ ಬೆಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಅಶ್ವಥನಾರಾಯಣ ಗುಲಾಬಿ ಹೂವು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು ಮತ್ತು 34 ನೇ ಅಧಿವೇಶನದ ಜರ್ನಲ್ ಬಿಡುಗಡೆಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್. ರಾಜಶೇಖರ್ ಅವರು ಡಾ. ವಾಸುದೇವ ಬಡಿಗೇರ ಮತ್ತು ಡಾ. ಗಂಗಾಧರ ದೈವಜ್ಞ ವಿರಚಿತ “ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಮತ್ತು ಆರಾಧನಾ ಪರಂಪರೆ” ಡಾ.ಶಿವಾನಂದ ಆರ್ ನಾಗಣ್ಣನವರ ವಿರಚಿತ “ಕರ್ನಾಟಕದಲ್ಲಿ ಶೈವ ಧರ್ಮದ ಬೆಳವಣಿಗೆ” ಮತ್ತು “ಶೈವಾವಲೋಕನ” ಡಾ. ಮೋಹನ್ ವಿರಚಿತ “ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ”, ಪ್ರೊ. ನಾಗರತ್ನಮ್ಮ ವಿರಚಿತ “ಕೋಲಾರ ಜಿಲ್ಲೆ ಸ್ವಾತಂತ್ರ್ಯ ಚಳುವಳಿ”, ಡಾ. ಅನಿತಾ ವಿರಚಿತ “ಜೀವಜಲ” ಮತ್ತು ಡಾ. ಎಸ್.ಕೆ.ಅರುಡಿ ವಿರಚಿತ “ಸೃಜನಿ” ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಇತಿಹಾಸ ಪರಿಷತ್ತು ಅಧ್ಯಕ್ಷರಾದ ಆರ್. ರಾಜಣ್ಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಸ್ವಾಗತಿಸಿದರು, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ವಂದಿಸಿದರು. ಕರ್ನಾಟಕ ಇತಿಹಾಸ ಪರಿಷತ್ತಿನ ಸ್ಥಳೀಯ ಕಾರ್ಯದರ್ಶಿ ಕೆ. ಗೋಪಾಲ್ ಸರ್ವಾಧ್ಯಕ್ಷರನ್ನು ಪರಿಚಯಿಸಿದರು. ಉಪನ್ಯಾಸಕಿ ರೋಹಿಣಿ ಶರಣ್ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳಾದ ಸ್ಮೃತಿ ಮತ್ತು ತಂಡ ಪ್ರಾರ್ಥನೆ ಮಾಡಿದರು.