Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಮನೆಯಲ್ಲಿ ಕಳ್ಳತನ, ಪ್ರಕರಣ ದಾಖಲು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಸೌಕೂರು ಗ್ರಾಮದ ಸುಮಾವತಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಕಳ್ಳತನ ಮಾಡಿದ್ದಾಗಿ ದೂರಲಾಗಿದೆ.

ಕೃಷಿ ಭೂಮಿ, ಮನೆ ಕೆಲಸಕ್ಕೆಂದು ಹಾವೇರಿ ಜಿಲ್ಲೆಯ ಸೋಮಾಪುರದ ಮಂಜುನಾಥ ಕೋಡಿಹಳ್ಳಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು, ಮದುವೆಗೆಂದು ಮನೆಗೆ ಬೀಗ ಹಾಕಿ ಬೀಗ ಅಡಗಿಸಿಟ್ಟು ಹೋಗಿದ್ದರು.

ಆಗ ಮಂಜುನಾಥ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಮರಳಿ ಮನೆಗೆ ಬಂದಾಗೆ ಕೆಲಸದವನೂ ಇರಲಿಲ್ಲ. ಕಪಾಟಿನಲ್ಲಿದ್ದ 60,000 ರೂ. ಇರಲಿಲ್ಲ.   

ಈ ಬಗ್ಗೆ ಗ್ರಾಮಾಂತರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version