Kundapra.com ಕುಂದಾಪ್ರ ಡಾಟ್ ಕಾಂ

ಅಟಲ್ ಪಿಂಚಣಿ ಯೋಜನೆ ಆರ್ಥಿಕ ಸದೃಢತೆಗೆ ಬುನಾದಿ

ಕುಂದಾಪುರ: ಆರ್ಥಿಕ ಸಾರ್ಥಕತೆ ಅಭಿಯಾನದಲ್ಲಿ ೧೮ ವರ್ಷದಿಂದ ೪೦ ವರ್ಷದವರೆಗಿನವರು ಅಟಲ್ ಪಿಂಚಣಿ ಯೋಜನೆಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು. ಈ ಯೋಜನೆಯು ನಮ್ಮ ಜೀವನದಲ್ಲಿ ಆರ್ಥಿಕ ಸದೃಢತೆಗೆ ಬುನಾದಿಗೆ ಸಹಕಾರಿಯಾಗಲಿದೆ ಎಂದು ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಮುಖ್ಯ ಪ್ರಬಂಧಕ ಸತೀಶ ಬೀಡು ಅಭಿಪ್ರಾಯಪಟ್ಟರು.

ಅವರು ಇತ್ತೀಚಿಗೆ ಜರಗಿದ ಬಾಂಡ್ಯ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಕೆನರಾ ಬ್ಯಾಂಕಿನ ಕೃಷಿ ವಿಸ್ತರಣಾಧಿಕಾರಿ ಪ್ರವೀಣಕುಮಾರ್ ಅವರು ಬ್ಯಾಂಕಿನ ಕೃಷಿ ಸಾಲ ಸೌಲಭ್ಯಗಳು ಹಾಗೂ ಕೃಷಿ ಸಾಲದ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಜಯರಾಮ್ ವಂದಿಸಿದರು.

Exit mobile version