ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕವಿಗಳ ಕವಿ ಗೊಪಾಲಕೃಷ್ಣ ಅಡಿಗರ ಹುಟ್ಟು ಪರಿಸರದ ಭಾಷೆ ಬದುಕಿನ ಸೊಗಡನ್ನೊಳಗೊಂಡಿರುವ ಯಾವುದೇ ಉತ್ತಮ ಪುಸ್ತಕಕ್ಕೆ ಮೊಗೇರಿ ಸಮಷ್ಟಿ ವಾರ್ಷಿಕ ಪುಸ್ತಕ ಪುರಸ್ಕಾರವನ್ನು ನೀಡಲಾಗುವುದು ಎಂದು ಮೊಗೇರಿ ಅಡಿಗರ ಸಮಷ್ಟಿ ಬಳಗದ ಮುಖ್ಯಸ್ಥರಾದ ಎಂ. ಜಯರಾಮ ಅಡಿಗರು ಮೊಗೇರಿ ಸ್ವಾಣಿ ಹಬ್ಬದಲ್ಲಿ ಪ್ರಕಟಿಸಿದರು.
ಮೊದಲ ಪುರಸ್ಕಾರಕ್ಕೆ ಕೆ. ಪುಂಡಲೀಕ ನಾಯಕ್ರ ‘ಭಾವ ಸ್ಮೃತಿ’ ಆತ್ಮಕಥನ ಆಯ್ಕೆ ಆಗಿದೆ ಎಂದರು.
ಪ್ರತಿ ವರ್ಷ ಯುಗಾದಿಯ ಮುಂಚೆ ಹಿಂದಿನ ವರ್ಷ ಸಿದ್ಧವಾದ ಹೊಸ ಪುಸ್ತಕದ ಹಸ್ತ ಪ್ರತಿ ಅಥವಾ ಡಿಟಿಪಿ ಪ್ರತಿಗಳನ್ನು ಪ್ರಕಾಶನ ಪೂರ್ವದಲ್ಲಿ ಪರಿಶೀಲಿಸಿ ಮೊಗೇರಿ ಸಮಷ್ಟಿ ಪುರಸ್ಕಾರವನ್ನು ಸ್ವಾಣಿ ಹಬ್ಬದಲ್ಲಿ ಪ್ರಕಟಿಸಲಾಗುತ್ತದೆ.

ಮೊಗೇರಿ ಸ್ವಾಣಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಲೇಖಕಿ, ಸಂಪನ್ಮೂಲ ವ್ಯಕ್ತಿ ಪೂರ್ಣಿಮಾ ಕಮಲಶಿಲೆ ನಿರ್ದೇಶಕತ್ವದಲ್ಲಿ ಗೃಹಿಣೀ ಶಕ್ತಿ, ಮಕ್ಕಳ ಅಭಿ ವ್ಯಕ್ತಿ ಕಾರ್ಯಕ್ರಮ ಸರಣಿಯನ್ನು ಉದ್ಘಾಟಿಸಲಾಯಿತು.
ಅಧ್ಯಕ್ಷತೆ ವಹಿಸಲಿದ್ದ ಶಾಸಕ ಗುರುರಾಜ ಗಂಟಿಹೊಳಿ ಅವರು ಮುಂಜಾನೆ ಧರ್ಮಸ್ಥಳದಲ್ಲಿ ಇರಬೇಕಾದ ಸಂದರ್ಭ ಉಂಟಾದ್ದರಿಂದ ಹಿಂದಿನ ದಿನ ಸಾಯಂಕಾಲ ಮೊಗೇರಿ ದೇವಸ್ಥಾನ ದರ್ಶನ ಮಾಡಿ ಮಂಗಳಾರತಿ ಪ್ರಸಾದ ಸ್ವೀಕರಿಸಿ ಮೊಗೇರಿ ಸ್ವಾಣಿ ಹಬ್ಬಕ್ಕೆ ಸಾರ್ಥಕವಾಗಲಿ ಎಂದು ಹಾರೈಸಿರುವುದಾಗಿ ಜಯರಾಮ ಅಡಿಗರು ತಿಳಿಸಿದರು.