Site icon Kundapra.com ಕುಂದಾಪ್ರ ಡಾಟ್ ಕಾಂ

ಕರಾಟೆ ಸ್ಪರ್ಧೆಯಲ್ಲಿ ಜನತಾ ಕಿರಿಮಂಜೇಶ್ವರದ ವಿದ್ಯಾರ್ಥಿ ರಜತ್ ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶಾಲಾ ಶಿಕ್ಷಣ ಇಲಾಖೆ ಹಾಗೂ  ಸೇಂಟ್ ಫ್ರಾನ್ಸಿಸ್  ಕ್ಸೆವಿಯರ್  ಇಂಗ್ಲಿಷ್ ಮೀಡಿಯಂ  ಶಾಲೆ ಉದ್ಯಾವರ ಇವರ ಸಹಭಾಗಿತ್ವದಲ್ಲಿ  ನಡೆದ  ಜಿಲ್ಲಾಮಟ್ಟದ  ಕರಾಟೆ  ಸ್ಪರ್ಧೆಯಲ್ಲಿ  14 ವರ್ಷದ  ಒಳಗಿನ  ವಯೋಮಿತಿಯ  50 ಕೆಜಿ  ವಿಭಾಗದಲ್ಲಿ  ಕಿರಿಮಂಜೇಶ್ವರದ  ಜನತಾ  ನ್ಯೂ  ಇಂಗ್ಲಿಷ್  ಮೀಡಿಯಂ  ಶಾಲೆಯ  8ನೇ ತರಗತಿ ವಿದ್ಯಾರ್ಥಿ ರಜತ್  ವಿಜಯಶಾಲಿಯಾಗಿ  ರಾಜ್ಯ ಮಟ್ಟಕ್ಕೆ  ಆಯ್ಕೆಯಾಗಿರುತ್ತಾನೆ.  

ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಮತ್ತು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಹಾಗೂ ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜನತಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ – https://kundapraa.com/?p=88804 .

Exit mobile version