Kundapra.com ಕುಂದಾಪ್ರ ಡಾಟ್ ಕಾಂ

ಡಿ.10 ರಿಂದ13: ಕುಂದಾಪುರದಲ್ಲಿ ಕಾರ್ಟೂನು ಹಬ್ಬ

ಕುಂದಾಪುರ: ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ‍್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಡಿ.10-13ವರೆಗೆ ಕಾರ್ಟೂನ್ ಹಬ್ಬ ಜರುಗಲಿದ್ದು ಉದ್ಯಮಿ ಆನಂದ ಸಿ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾರ್ಟೂನ್ ಹಬ್ಬ ಹಾಸ್ಯದ ಹೈವೇ ಎಂಬ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಕಾರ್ಟೂನ್ ಪ್ರದರ್ಶನ, ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗೆ ಸಂವಾದ, ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ, ವೈದ್ಯರುಗಳಿಗಾಗಿ ಡೂಡ್ಲಿಂಗ್ ವಿತ್ ಡಾಕ್ಟರ್, ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ಸ್ವರ್ಧೆ, ಸಾರ್ವಜನಿಕರಿಗೆ ಕಾರ್ಟೂನ್ ಡೈಲಾಗ್ ಬರೆಯೋ ಸ್ವರ್ಧೆ, ಸೆಲ್ಫಿ ಕಾರ್ನ್‌ರ್, ಲೈವ್ ಕ್ಯಾರಿಕೇಚರ್ ಬರೆಯುವುದು ವಿವಿಧ ಸ್ವರ್ಧೆ, ಕಾರ್ಯಾಗಾರ, ಕಾರ್ಟೂನ್ ಸಂಬಂಧಿತ ಮಾತುಕತೆ, ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version