Kundapra.com ಕುಂದಾಪ್ರ ಡಾಟ್ ಕಾಂ

ಡಿ. 13: ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ

ಕುಂದಾಪುರ: ಡಿ.10 ರಿಂದ 13 ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಾರ್ಟೂನ್ ಹಬ್ಬ ಜರುಗಲಿದ್ದು ಕೊನೆಯ ದಿನ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ ಜರುಗಲಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಲ್ಲಿ ಕಾರ್ಟೂನ್ ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ’ ಜರುಗಲಿದೆ.

ಡಿ.13ರ ಭಾನುವಾರ ಮಧ್ಯಾಹ್ನ 2:30ಕ್ಕೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಬೆಲೆಯೇರಿಕೆ, ಡಿಜಿಟಲ್ ಇಂಡಿಯಾ ಹಾಗೂ ಶಿಕ್ಷಣ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಸ್ವರ್ಧಾಳುಗಳು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಪರಿಕರಗಳನ್ನು ತಾವೇ ತರಬೇಕು. ವಿಜೇತರಿಗೆ ಅದೇ ದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version