ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸುರಭಿ ರಿ. ಬೈಂದೂರು ಸಂಸ್ಥೆಯು ರಜತ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ʼಕಥಾ ಸ್ಪರ್ಧೆಯನ್ನು ಆಯೋಜಿಸಿದೆ.
ರಾಜ್ಯದ ಕಥೆಗಾರರಿಂದ ಸ್ವತಂತ್ರ ರಚನೆಯ, ಪ್ರಕಟವಾಗಿರದ ಕಥೆಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದ್ದು, ವಿಜೇತರಿಗೆ ಪ್ರಥಮ ರೂ.10,000, ದ್ವೀತಿಯ ರೂ.8,000, ಹಾಗೂ ತೃತೀಯ ರೂ.5,000 ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ನಿಮ್ಮ ಕಥೆಗಳನ್ನು 20 ಸೆಪ್ಟೆಂಬರ್ 2025ರ ಒಳಗೆ ಕಳಹಿಸಬಹುದಾಗಿದೆ. ಅಕ್ಟೋಬರ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು.
ನಿಯಮಗಳು:
- ಕಥೆ ಸ್ವತಂತ್ರ ರಚನೆಯಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟ/ಪ್ರಸಾರವಾಗಿರಬಾರದು. ಕೃತಿ ಹಕ್ಕುಸ್ವಾಮ್ಯಕ್ಕೆ ಲೇಖಕರೇ ಜವಾಬ್ದಾರರು.
- ಕಥೆಗಳು ಕನಿಷ್ಠ 800 ರಿಂದ 1000 ಪದಗಳ ಮಿತಿಯಾಗಿರುತ್ತದೆ.
- ಸ್ಪರ್ಧಿಯ ಹೆಸರು/ಲೇಖಕರ ಹೆಸರು ವಿಳಾಸ ದೂರವಾಣಿ ಹಾಗೂ ಭಾವಚಿತ್ರಗಳನ್ನು ಕಥೆಯೊಂದಿಗೆ ಕಳುಹಿಸುವುದು.
- ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ.
- ಕಥೆಯನ್ನು A4 ಸೈಜ್ ಪೇಪರ್ ನಲ್ಲಿ ಟೈಪ್ ಮಾಡಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು ಕೈ ಬರಹದ ಪ್ರತಿಗಳಿಗೆ ಅವಕಾಶವಿರುವುದಿಲ್ಲ.
- ವಿಜೇತರಿಗೆ ಫೋನ್ ಮೂಲಕ ತಿಳಿಸಲಾಗುವುದು.
- ಸಂಘಟಕರ ತೀರ್ಮಾನವೇ ಅಂತಿಮ ತೀರ್ಮಾನ
ಹೆಚ್ಚಿನ ಮಾಹಿತಿಗಾಗಿ – 9945944269
ಕಥೆಗಳನ್ನು ಕಳುಹಿಸಬೇಕಾದ ವಿಳಾಸ
ಸುಧಾಕರ ಪಿ
ನಿರ್ದೇಶಕರು
ಸುರಭಿ ರಿ. ಬೈಂದೂರು,
ಬೈಂದೂರು ತಾಲೂಕು, ಉಡುಪಿ ಜಿಲ್ಲೆ – 576214

