Site icon Kundapra.com ಕುಂದಾಪ್ರ ಡಾಟ್ ಕಾಂ

ಯಡ್ತರೆ: ಇಲಿ ಪಾಷಾಣ ಸೇವಿಸಿ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಯಡ್ತರೆ ಗ್ರಾಮದ ನಿವಾಸಿ ಶೇಖರ ಪೂಜಾರಿ (70) ಅವರು ಇಲಿ ಪಾಷಾಣ ಸೇವಿಸಿ ಇತ್ತೀಚಿಗೆ ಮೃತಪಟ್ಟಿ ದ್ದಾರೆ.

ಅವರು ಸೆ.20ರಂದು ಮನೆಗೆ ಕುಡಿದು ಬಂದಿದ್ದು ಮನೆಯವರೊಂದಿಗೆ ಗಲಾಟೆ ಮಾಡಿಕೊಂಡು ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.

ಪುತ್ರ ಲೋಹಿತ್ ಪೂಜಾರಿ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version