Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಭುವನೇಂದ್ರ ತೀರ್ಥ ಸ್ವಾಮೀಜಿಯ ಪುಣ್ಯತಿಥಿ

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯ ಪುಣ್ಯತಿಥಿಯ ಪ್ರಯುಕ್ತ ಮಹಾಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೋಕ್ತೇಸರ ಶ್ರೀಧರ ಕಾಮತ ಈ ಸಂದರ್ಭದಲ್ಲಿ ಮಾತನಾಡುತ್ತಾ ಭುವನೇಂದ್ರ ತೀರ್ಥ ಸ್ವಾಮೀಜಿಯವರು ಆಯುರ್ವೇದದಲ್ಲಿ ಆಳವಾದ ಅಧ್ಯಯನ ಮಾಡಿ ಸ್ವತಃ ಔಷಧಿಗಳನ್ನು ತಯಾರಿಸಿ ಸಮಾಜದ ಎಲ್ಲಾ ವರ್ಗದ ಜನರ ಖಾಯಿಲೆ ಗುಣಪಡಿಸುತ್ತಿದ್ದರು ಎಂದರು. ಈ ಸಂಧರ್ಭದಲ್ಲಿ ಸೇವಾದಾರರಾದ ರಾಮರಾಯ ಗೋವಿಂದ್ರಾಯ ಕಾಮತ ಮತ್ತು ಸಹೋದರರು ಉಪಸ್ಥಿತರಿದ್ದರು.

Exit mobile version