ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಇತ್ತೀಚೆಗೆ ಎಫ್ಎಸ್ಎಲ್ ಇಂಡಿಯಾ ಸಹಯೋಗದೊಂದಿಗೆ ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಕೇಶ್ ಸೋನ್ಸ್, ಪ್ರೆಸಿಡೆಂಟ್, ಎಫ್ ಎಸ್ ಎಲ್ ಇಂಡಿಯಾ ಅಂಡ್ ಹಿಸ್ ಟೀಮ್ ಅವರು ಆಗಮಿಸಿ ವಿದ್ಯಾರ್ಥಿಗಳು ಹೇಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಪ್ರತಿ ವಿದ್ಯಾರ್ಥಿಗಳಲ್ಲಿಯೂ ನಾಯಕತ್ವ ಗುಣಗಳಿರುತ್ತದೆ ಅದನ್ನು ಹೇಗೆ ಸಾಮಾಜಿಕ ಅಭಿವೃದ್ಧಿಗೆ ಉಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದರು.

ಈ ಕಾರ್ಯಗಾರದಲ್ಲಿ ಎಫ್ ಎಸ್ ಎಲ್ ಇಂಡಿಯಾ, ಸಿಇಎಲ್ ಕೊರ್ಡಿನೇಟರ್ ಅಂಡ್ ಇಂಚಾರ್ಜ್ ಆದ ನಾಗರಾಜ್ ಶೆಟ್ಟಿ ಎನ್, ಎಫ್ ಎಸ್ ಎಲ್ ಇಂಡಿಯಾ ವೈಡಿಪಿ ಕೋರ್ಡಿನೇಟರ್ ರಕ್ಷಾ ವಿ. ಶೆನೊಯ್ ಕೆ, ಸಿಇಎಲ್ ವಾಲೆಂಟಿರ್ ಫ್ರಮ್ ಜರ್ಮನಿಯಾವಾರಾದ ಆಂಟೋನಿಯಾ ಗ್ರೋಸ್ ಮತ್ತು ಜೋಯೆಲ್ ಫುಮಗಲ್ಲಿ ಅವರುಗಳು ಕೂಡ ಅವರ ಜೊತೆ ಸಹಕರಿಸಿ ಉತ್ತಮವಾದ ತರಬೇತಿಯನ್ನು ನೀಡುವಲ್ಲಿ ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು