ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಬೋ ಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯ ಸಿಎಸ್ಆರ್ ನಿಧಿ ಮೂಲಕ ಶಾಲಾ ಕೊಠಡಿಯ ನಿರ್ಮಾಣವಾಗಲಿದ್ದು ಶುಕ್ರವಾರ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಗಂಟಿಗೊಳೆ ಅವರು ಈ ಕನಸಿಗೆ ರೆಕ್ಕೆಪುಕ್ಕ ನೀಡಿದ್ದು ಬೈಂದೂರು ಉತ್ಸವ. ಬೈಂದೂರು ಉತ್ಸವದ ಯಶಸ್ಸು, ಗುರಿ ಇಂದು ಬೈಂದೂರು ಕ್ಷೇತ್ರದಲ್ಲಿ ಇಂತಹ ಕಾರ್ಯಗಳನ್ನು ನಮ್ಮಿಂದ ದಾನಿಗಳ ಮೂಲಕ ಮಾಡಿಸುತ್ತಿದೆ. ಬೈಂದೂರು ಉತ್ಸವ ಯಶಸ್ಸು ಈ ರೀತಿಯ ಕಾರ್ಯಕ್ರಮಗಳ ಮೂಲಕ ಪ್ರತಿಧ್ವನಿಸುತ್ತಿರುವುದು ಬೈಂದೂರಿನ ಗೆಲುವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಿಇಒ ರಾನ್ ಮಹಾನ್, ಗ್ಲೋಬಲ್ ಸೇಲ್ಸ್ ಸಂಸ್ಥೆಯ Executive Vice-President ಸ್ಟೀಫನ್, Global Delivery ಇದರ Executive Vice-President ಶ್ರೀನಿಧಿ ರಾವ್, ಎಚ್ಆರ್ ರೀನಾ ಮಲಿಕ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.