Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸಲು ಶಾಸಕ ಕೊಡ್ಗಿ ಸದನದಲ್ಲಿ ಪ್ರಸ್ತಾವನೆ. ಸಚಿವರಿಂದ ಸ್ಪಂದನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸುವ ಬಗ್ಗೆ ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಅಧಿವೇಶನದಲ್ಲಿ ಸರ್ಕಾರದ ಗಮನ ಸಳೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 1,53, 114 ಹೆಕ್ಟರ್ ಕೃಷಿ ಭೂಮಿ ಇದ್ದು ಅದರಲ್ಲಿ ರೈತರು ಭತ್ತ ಮತ್ತು ಕಮರ್ಷಿಯಲ್ ಕ್ರಾಪ್ ಆದ ಅಡಿಕೆ, ತೆಂಗು, ಇತರೆ ಕೃಷಿಯನ್ನ ನಿರ೦ತರ ಮಾಡುತ್ತಾ ಇದ್ದಾರೆ. 2010ರಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆವಾಗ ಕೃಷಿ ಕಾಲೇಜು ಮಂಜೂರಾತಿ ನೀಡಲಾಗಿದೆ. ಆದರೆ 2014ರ ತನಕ ಯಾವುದೇ ಕೆಲಸ ಆಗಿರುವುದಿಲ್ಲ. 2014ರಲ್ಲಿ ಕೃಷಿ ಡಿಪೆ ‘ಮಾ ಕಾಲೇಜು ಪ್ರಾರ೦ಭ ಮಾಡಲಾಗಿರುತ್ತದೆ. ಅದರ ನಂತರ ನಿರಂತರವಾಗಿ ಉಡುಪಿ ಜಿಲ್ಲೆಯಲ್ಲಿ ಕೃಷಿ ಕೃಷಿ ಪದವಿ ಕಾಲೇಜುಗಾಗಿ ಸರಕಾರಕ್ಕೆ ಬೇಡಿಕೆ ಇಟ್ಟಿದ್ದು ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ 300 ಎಕರೆ ಜಾಗವಿದ್ದು, ಹಾಸ್ಟೆಲ್‌ ಹಾಗೂ ಕಾಲೇಜ್ ಗೆ ಅಗತ್ಯವಿರುವ ಕಟ್ಟಡ ಮತ್ತು ಲ್ಯಾಬೋರೇಟರಿ ಸೇರಿದಂತೆ ಇತರ ಸಂಪೂರ್ಣ ಮೂಲಭೂತ ಸೌಕರ್ಯ ಇದ್ದರೂ ಕೂಡ ಕೃಷಿ ಪದವಿ ಕಾಲೇಜು ತೆರೆಯಲಿಕ್ಕೆ ಮನಸ್ಸು ಮಾಡಲಿಲ್ಲ.

ಸಚಿವರು ಉತ್ತರ ನೀಡಿದ್ದು 18/06/22ರಂದು ನಡೆದ ಪರಿಣಿತ ಸಮಿತಿಯ ಸಭೆಯ ನಡಾವಳಿಯಲ್ಲಿ ನೂತನ ಕೃಷಿ ಕಾಲೇಜು ಪ್ರಸ್ತಾವನೆಯನ್ನು ಪರಿಗಣಿಸಿದೆ. ನೂತನ ಕಾಲೇಜನ್ನು ಪ್ರಾರಂಭಿಸುವ ಮೊದಲು ಪ್ರಸ್ತುತ ಚಾಲ್ತಿಯಲ್ಲಿರುವ ಕಾಲೇಜುಗಳನ್ನ ಬಲಪಡಿಸಲು ನಿರ್ಧರಿಸಲಾಗುತ್ತಿದೆ ಎ೦ದು ತಿಳಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಬೆಳಗಾವಿ ಅಥಣಿಯಲಿ ಹೊಸ ಕೃಷಿ ಕಾಲೇಜು ಪ್ರಾರಂಭಿಸಬೇಕು ಎಂದು ಪ್ರಸ್ತಾವನೆ ಇಟ್ಟಿದ್ದಾರೆ.

ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ವ್ಯಾಪ್ತಿಯಲ್ಲಿ 300 ಎಕರೆ ಜಾಗವಿದ್ದು ಕಾಲೇಜು ಪ್ರಾರಂಭಕ್ಕೆ ಸ೦ಪೂರ್ಣ ಮೂಲಭೂತ ಸೌಕರ್ಯ ಇದ್ದರೂ ಸಹ ಯಾಕೆ ಕೃಷಿ ಪದವಿ ಪ್ರಾರಂಭಿಸುತ್ತಿಲ್ಲ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು. ಕೃಷಿ ಪದವಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಬೇಡಿಕೆ ಇರುವುದರಿ೦ದ. ಮಂಜೂರಾತಿಗೆ ಶಾಸಕರು ಕೋರಿದರು.

ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಉತ್ತರಿಸಿ ಪೂರಕವಾಗಿ ಸ್ಪಂದನೆ ಮಾಡಿ, ಶೀಘ್ರವಾಗಿ ಕೃಷಿ ಪದವಿ ಪ್ರಾರಂಭ ಮಾಡಲು ಸಹಮತ ವ್ಯಕ್ತಪಡಿಸಿದ್ದರು.

Exit mobile version