ಕುಂದಾಪುರ: ಕೋಟೇಶ್ವರದ ಏ ಒನ್ಸ್ ಸ್ಪೋಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ಜರುಗಿದ ಅಂತರ್ ಜಿಲ್ಲಾ ಚೆಸ್ ಪಂದ್ಯಾಟದಲ್ಲಿ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಶ್ ಶೇರೆಗಾರ್ ಅಗ್ರಪ್ರಶಸ್ತಿ ಪಡೆದುಕೊಂಡಿದ್ದಾರೆ.
8 ವರ್ಷದೊಳಗಿನ ಬಾಲಕರ ವಿಭಾಗ:
ಪ್ರಥಮ-ಶಮಂತ್ ಜಿ.ಭಟ್ ಮಂಗಳೂರು, ದ್ವಿತೀಯ-ಮಿಲಿಂಡ್ ಶೆಟ್ಟಿ ಲಿಟ್ಲ್ರಾಕ್ ಬ್ರಹ್ಮಾವರ, ತೃತೀಯ-ಸಾರ್ಥಕ್ ಎ.ದೇವಾಡಿಗ ಉಡುಪಿ. ಬಾಲಕಿಯರ ವಿಭಾಗ: ಪ್ರಥಮ-ಜೆತ್ರಾಮಯ್ಯ ಬ್ರಹ್ಮಾವರ, ದ್ವಿತೀಯ-ಮಿಥಾಲಿ ಶೆಟ್ಟಿ ಬ್ರಹ್ಮಾವರ, ತೃತೀಯ-ಗೌತಮ್ ಕಾಮತ್ ಬ್ರಹ್ಮಾವರ.
12 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಅಶುತೋಷ್ ಎಸ್.ಶರ್ಮ ಮಂಗಳೂರು, ದ್ವಿತೀಯ-ಜಾಗೃತ್ ಎ.ದೇವಾಡಿಗ ಉಡುಪಿ, ತೃತೀಯ-ಚಿನ್ಮಯ್ ಮಣಿಪಾಲ. ಬಾಲಕಿಯರ ವಿಭಾಗ: ಪ್ರಥಮ-ಸ್ವಸ್ತಿ ಭಟ್ ಮಂಗಳೂರು, ದ್ವಿತೀಯ-ಸಿರಿ ಎಂ ಭಟ್ ಮಂಗಳೂರು, ತೃತೀಯ-ಅಪರ್ಣಾ ಪ್ರಭು ಮಂಗಳೂರು.
15 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಮನೀಶ್ ಜಿ.ಶಿರಿಯಾನ್ ಕುಂದಾಪುರ, ದ್ವಿತೀಯ-ಪೂರ್ಣೇಶ್ ಸಿ.ಮೊಗವೀರ ಕುಂದಾಪುರ, ತೃತೀಯ-ಶತ್ರುಘ್ನ ಧೀರು ಮಂಗಳೂರು. ಬಾಲಕಿಯರ ವಿಭಾಗ: ಪ್ರಥಮ-ಆಶ್ವಿಜಾ ಭರಣ್ಯ ಮಂಗಳೂರು, ದ್ವಿತೀಯ-ಹನೀಹ ಜೈನಾಬ್ ಮಂಗಳೂರು, ತೃತೀಯ- ಅಶ್ವಿನಿ ಕೆ.ಕುಂದಾಪುರ.
ಮುಕ್ತ ವಿಭಾಗ: ಪ್ರಥಮ-ಮನೀಶ್ ಶೇರೆಗಾರ್ ಸಂತೆಕಟ್ಟೆ, ದ್ವಿತೀಯ-ಎಸ್.ಚಂದನ್ ಶರ್ಮ ಉಡುಪಿ, ತೃತೀಯ-ಬಿನ್ನಿ ಕೆ.ಜೆ.ಕುಂದಾಪುರ, ಚತುರ್ಥ-ಮಹಿಮಾ ಶೇರೆಗಾರ್ ಸಂತೆಕಟ್ಟೆ, ಪಂಚಮ-ಸಮರ್ಥ ಜೆ.ರಾವ್ ಬಸ್ರೂರು.
ಬಹುಮಾನ ವಿತರಣೆ: ಮುಖ್ಯ ಅತಿಥಿ ವಾಸುದೇವ ಎಂ.ಆರ್.ಮಂಗಳೂರು ವಿಜೇತರಿಗೆ ಬಹುಮಾನ ವಿತರಿಸಿದರು. ಬಸ್ರೂರು ಶಾರದಾ ಕಾಲೇಜಿನ ಪ್ರಿನ್ಸಿಪಾಲ್ ರಾಧಾಕೃಷ್ಣ ಶೆಟ್ಟಿ, ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ದಿನಕರ್ ಹೆಗ್ಡೆ. ಶಿಕ್ಷಕ ಗಣೇಶ್ ಶೆಟ್ಟಿ, ಡೆರಿಕ್ ಚೆಸ್ ಸ್ಕೂಲ್ನ ಪ್ರಸನ್ನ ರಾವ್. ಏ ಓನ್ಸ್ ಸ್ಪೋಟ್ಸ್ ಎಂಡ್ ಕಲ್ಚರಲ್ ಕ್ಲಬ್ನ ಅಧ್ಯಕ್ಷ ರಾಜೇಶ್ ಪ್ರಭು ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ನರೇಶ್ ಕಾರ್ಯಕ್ರಮ ನಿರ್ವಹಿಸಿದರು.