ಉದ್ಯಮಿ, ಧಾರ್ಮಿಕ – ಸಾಮಾಜಿಕ ಮುಂದಾಳು ಸುರೇಶ್ ಪಡುಕೋಣೆ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉದ್ಯಮಿ, ಧಾರ್ಮಿಕ ಮುಂದಾಳು, ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸುರೇಶ ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Call us

Click here

Click Here

Call us

Call us

Visit Now

Call us

ಚಿಕ್ಕವಯಸ್ಸಿನಲ್ಲೇ ಬಾಂಬೆ ಸೇರಿದ ಸುರೇಶ ಪಡುಕೋಣೆ ಅವರು ಭಾರತ್ ಬೋರಿಂಗ್ ಕಂಪನಿಯಲ್ಲಿ ಗ್ರೈಂಡರ್ ಆಪರೇಟರಾಗಿ ವೃತ್ತಿ ಆರಂಭಿಸಿ, ನಂತರ ಅಪೋಲೋ ಬೋರಿಂಗ್ ಇಂಡಸ್ಟ್ರೀಸ್ ಮೂಲಕ ಸ್ವಂತ ಉದ್ಯಮ ಆರಂಭಿಸಿದರು. ಬಳಿಕ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟರು.

ಧಾರ್ಮಿಕ ಕ್ಚೇತ್ತದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಸುರೇಶ್ ಪಡುಕೋಣೆ ಅವರು ಆಂಜನೇಯ ಸ್ವಾಮಿ ಪರಮ ಭಕ್ತರಾಗಿದ್ದು, ಕುಂದಾಪುರ ಹಂಗಳೂರಲ್ಲಿ 82 ಅಡಿ ಎತ್ತರ ಆಂಜನೇಯ ಸ್ವಾಮಿ ಪ್ರತಿಷ್ಠಾನೆ ಮಾಡಿ, ಪ್ರತೀ ವರ್ಷ ಪ್ರತಿಷ್ಠಾ ಮಹೋತ್ಸವ ನಡೆಸಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದರು. ಆನೆಗುಡ್ಡೆ ಸ್ವಾಗತ ಗೋಪುರ, ಪಡುಕೋಣೆ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಈಶ್ವರ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕೆರೆ ನವೀಕರಿಸಿದ್ದರು.

ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟೀ, ಕುಂದಾಪುರ ತಾಲೂಕು ದೇವಾಡಿಗ ಸಂಘದ ಮಹಾಪೋಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದ ಅವರು ಶೈಕ್ಷಣಿಕ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದರು. ಕೋ.ಮ. ಕಾರಂತ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಗೌರವ ಸಿಕ್ಕದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಅಗಲಿದ್ದಾರೆ.

ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯಿಲಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂತಾಪ ಸೂಚಿಸಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ಅಂತಿಮ ದರ್ಶನ ಮಾಡಿದರು.

Call us

Leave a Reply

Your email address will not be published. Required fields are marked *

14 − 8 =