ಪೊಲೀಸ್ ಜೀಪು ಅಪಘಾತ: ಸರ್ಕಲ್ ಇನ್ಸ್‌ಪೆಕ್ಟರ್, ಚಾಲಕನಿಗೆ ಗಾಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಒತ್ತಿನಣೆ ಬಳಿ ರಾತ್ರಿ ರೌಂಡ್ಸ್‌ನಲ್ಲಿದ್ದ ಬೈಂದೂರು ಸರ್ಕಲ್ ಇನ್ಸಪೆಕ್ಟರ್ ಜೀಪು ಪಲ್ಟಿಯಾಗಿ ಬೀಟ್‌ನಲ್ಲಿದ್ದ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್ ಹಾಗೂ ಜೀಪು ಚಾಲಕ ಹೇಮರಾಜ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

Click Here

Call us

Call us

ಶಿರೂರಿನಿಂದ ಬೈಂದೂರು ಕಡೆ ಬರುತ್ತಿದ್ದ ಸಂದರ್ಭ ರಾಘವೇಂದ್ರ ಸ್ವಾಮಿ ಮಠದ ಬಳಿ ಜೀಪು ನಿಯಂತ್ರಣ ತಪ್ಪಿ ಇನ್ನೊಂದು ರಸ್ತೆಯ ಬದಿಯ ಚರಂಡಿಗೆ ಅಡಿಮೇಲಾಗಿ ಬಿದ್ದಿತ್ತು. ಜೀಪ್‌ನಲ್ಲಿದ್ದ ವೃತ್ತ ನಿರೀಕ್ಷಕರಾದ ಸುರೇಶ್ ನಾಯ್ಕ್ ರವರ ಕಾಲಿಗೆ ಹಾಗೂ ಜೀಪ್ ಚಾಲಕ ಹೇಮರಾಜ್ ರವರ ತಲೆ, ಕೈ, ಕಾಲಿಗೆ ಪೆಟ್ಟಾಗಿದೆ.

Click here

Click Here

Call us

Visit Now

ಅಪಘಾತದ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೀಪ್‌ನಲ್ಲಿ ಸಿಕ್ಕಿಬಿದ್ದ ಇಬ್ಬರನ್ನು ಹೊರತೆಗೆಯಲು ಸುಮಾರು ಒಂದು ತಾಸು ಕಾರ್ಯಾಚರಣೆ ಮಾಡಿ ಬಳಿಕ ಕ್ರೇನ್ ಮೂಲಕ ಜೀಪ್ ಎತ್ತಿ ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಟ್ರಾಫಿಕ್ ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

Call us

Leave a Reply

Your email address will not be published. Required fields are marked *

five × 3 =