ಕುಂದಾಪುರ: ಗ್ರಾಹಕರ ಚಿನ್ನ, ನಗದು ಸೇರಿ 92 ಲಕ್ಷ ರೂ. ವಂಚನೆ ಆರೋಪ, ದೂರು ದಾಖಲು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಜುವೆಲ್ಲರಿಯೊಂದರಲ್ಲಿ ಚಿನ್ನ ಮತ್ತು ನಗದು ಹೂಡಿಕೆ ಮಾಡಿದ ಗ್ರಾಹಕರಿಗೆ ಹಲವು ಸಮಯದಿಂದ ಹೂಡಿಕೆ ಮಾಡಿರುವ ಚಿನ್ನ ಮತ್ತು ನಗದು ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Click Here

Call us

Call us

ಮೊಹಮ್ಮದ್ ಇಪ್ತಿಕಾರ್ ಕಂಡ್ಲೂರು, ಮೋಮಿನ್ ಯೂಸೆಫ್ ಆಲಿ ಭಟ್ಕಳ, ಗಣೇಶ್ ಶೆಟ್ಟಿ, ಖತೀಬ್ ಅಬ್ದುಲ್ ರೆಹಮಾನ್ ಭಟ್ಕಳ, ಬಿ.ಎಂ.ಜಾಫರ್, ಫರಾಜ್ ಆಶೀಪ್, ನಜೀರ್ ಅಹಮ್ಮದ್, ಮೊಹಮ್ಮದ್ ಮುಶ್ರಫ್, ಮೊಹಮ್ಮದ್ ಆಸೀಪ್, ಮೊಹಮ್ಮದ್ ನೂರೈಸ್, ಎಸ್.ಜೀವನ್, ಬೆಟ್ಟಿ ಭಾಷಾ, ಬೆಟ್ಟಿ ಅಕ್ಬರ್, ಬಶೀರ್ ಅಹ್ಮದ್, ಕೆ.ಮುನೀರ್, ಅರ್ಫಾದ್ ಮೊಹಮ್ಮದ್, ಮೊಹಮ್ಮದ್ ಪಾಮೀಝಾ, ಸರ್ದಾರ್ ಸವೀದ್ ಅಕ್ಬರ್, ನೌಶಾದ್, ಮೊಹಮ್ಮದ್ ಫಾರೀಸ್, ಬಿ.ಭಾನು, ನಾಸೀಯಾ, ವಾಹಿದಾ ಆಪಾದಿತರು. ಕುಂದಾಪುರ ನಿವಾಸಿ ಇರ್ಷಾದ್ ಗುಲ್ಜಾರ್ ಸೇರಿ 24 ಜನ ಗ್ರಾಹಕರು ಚಿನ್ನ ಹಾಗೂ ನಗದು ಕಳೆದುಕೊಂಡವರು.

Click here

Click Here

Call us

Visit Now

ಕುಂದಾಪುರ ಮುಖ್ಯರಸ್ತೆಯಲ್ಲಿ 2000ರಲ್ಲಿ ಆರಂಭವಾದ ಜುವೆಲ್ಲರಿಯಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿಯಾಸೆಗೆ ಚಿನ್ನ ಹಾಗೂ ನಗದನ್ನು ಠೇವಣಿ ಇರಿಸಿದ್ದರು. 2500 ರೂನಂತೆ ನಗದು ಹಾಗೂ ಚಿನ್ನಕ್ಕೆ ಬಡ್ಡಿ ನೀಡಲಾಗುತ್ತಿತ್ತು. ಗ್ರಾಹಕರಿಗೆ ಬಡ್ಡಿ ಮಾತ್ರ ನೀಡುತ್ತಿದ್ದು, ಹೂಡಿಕೆ ಮಾಡಿದ ಬಂಡವಾಳ ಮಾತ್ರ ಹಿಂದಕ್ಕೆ ನೀಡಿರಲಿಲ್ಲ.

24 ಜನ, 56,76 ಲಕ್ಷ ಮೌಲ್ಯದ ಚಿನ್ನ, ಹಾಗೂ 35.88 ಲಕ್ಷ ನಗದು ಸೇರಿ ಒಟ್ಟು 92.64 ಲಕ್ಷ ಹೂಡಿಕೆ ಮಾಡಿದ್ದರು. ಜುವೆಲ್ಲರಿ ಶಾಪ್ ಲಾಕ್ ಮಾಡಿದ್ದರಿಂದ ಗ್ರಾಹಕರು ಮೋಸಹೋಗಿದ್ದು ಗೊತ್ತಾಗಿದೆ.

ಕುಂದಾಪುರ ಕಸಬಾ ನಿವಾಸಿ ಇರ್ಷಾದ್ ಗುಲ್ಜಾರ್ ಎಂಬವರು ದೂರು ನೀಡಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಡಿಎಸ್ಪಿ ಶ್ರೀಕಾಂತ್ ಮಾರ್ಗದಶನದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಸುದರ್ಶನ್ ನಿರ್ದೇಶನದಲ್ಲಿ ಎಸ್ಸೈ ಸದಾಶಿವ ಗೊರೋಜಿ ತನಿಕೆ ನಡೆಸುತ್ತಿದ್ದಾರೆ.

Call us

Leave a Reply

Your email address will not be published. Required fields are marked *

two × 3 =