ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ / ಅಕ್ಟೋಬರ್ 2021ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ದೊರಕಿವೆ.
ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಯಡ್ತರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರ್ಯಾಂಕ್ ದೊರೆತಿದೆ.
ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ. ಶಾನಭಾಗ್ ಮತ್ತು ರಾಜೇಶ್ವರಿ ಅವರ ಪುತ್ರಿ ವೈಷ್ಣವಿ ಪಿ. ಶಾನಭಾಗ್ಗೆ ಏಳನೇ ರ್ಯಾಂಕ್ ಮತ್ತು ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯ ಸುಕುಮಾರ ಶೆಟ್ಟಿ ಮತ್ತು ಸುಜಾತ ಅವರ ಪುತ್ರಿ ಸೌಜನ್ಯ ಅವರಿಗೆ ಹತ್ತನೇ ರ್ಯಾಂಕ್ ದೊರೆತಿದೆ.
ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.