ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಟ್ಕಳ: ಇಲ್ಲಿನ ಹನುಮಾನನಗರದ ಮಮತಾ ದೇವೇಂದ್ರ ನಾಯ್ಕ್ ಅವರು ಮಂಡಿಸಿರುವ ‘ಕೆಲವು ಪ್ರಮುಖ ಆವರ್ತಕ ಸಂಯುಕ್ತಗಳ ಸಂಶ್ಲೇಷಣೆ, ಗುಣಲಕ್ಷಣ ಮತ್ತು ಜೈವಿಕ ಮೌಲ್ಯಮಾಪನ’ (Synthesis, Characterization And Biological Evaluation Of Some Novel Heterocyclic Compounds) ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಅವರು ಕುವೆಂಪು ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಯಾದವ ಬೋಡ್ಕೆ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಮಮತಾ ನಾಯ್ಕ್ ಅವರು ಪ್ರಸ್ತುತ ಭಟ್ಕಳದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಾಧನೆಗೆ ಕುಟುಂಬಸ್ಥರು, ಹನುಮಾನನಗರದ ನಾಮಧಾರಿ ಸಮಾಜ, ಯುವಕ ಮಂಡಲ, ಜೈ ಹನುಮಾನ್ ಯುವಕ ಮಂಡಲ, ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಊರಿನ ಮುಖಂಡರು ಅಭಿನಂದಿಸಿದ್ದಾರೆ.