ಮೂಕಾಂಬಿಕಾ ಟ್ರೋಫಿ ಕ್ರಿಕೆಟ್ ಪಂದ್ಯಾಟ: ಪ್ರಸಿದ್ಧಿ ಕ್ರಿಕೆಟರ್ಸ್‌ಗೆ ಗೆಲುವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿನ ನೆಲ್ಲಿಗೆದ್ದೆ ಕ್ರೀಡಾಂಗಣದಲ್ಲಿ ದಿ. ಎನ್. ರವೀಂದ್ರ ಭಟ್ ಸ್ಮರಣಾರ್ಥ ಎರಡನೇ ವರ್ಷದ ನೆಲ್ಲಿಗೆದ್ದೆ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ 30 ಗಜಗಳ ‘ಮೂಕಾಂಬಿಕಾ ಟ್ರೋಫಿ’ ಕ್ರಿಕೆಟ್ ಪಂದ್ಯಾಟ ನಡೆಯಿತು.

Click here

Click Here

Call us

Call us

Visit Now

Call us

Call us

ಪಂದ್ಯಾಟದಲ್ಲಿ ಪ್ರಸಿದ್ಧಿ ಕ್ರಿಕೆಟರ್ಸ್ ತಂಡವು ಗೆಲುವು ಸಾಧಿಸಿತು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು ಫೈನಲ್ ಹಣಾಹಣೆಯಲ್ಲಿ ಪ್ರಸಿಧ್ಧಿ ಕ್ರಿಕೆಟರ್ಸ ಮತ್ತು 8 ವಂಡರ್ಸ ಕ್ರಿಕೆಟರ್ಸ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು. ಫೈನಲ್ ಪಂದ್ಯದ ರೋಚಕ ಹಣಾಹಣೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಪ್ರಸಿಧ್ಧಿ ಕ್ರಿಕೆಟರ್ಸ ನಿಗದಿತ 5 ಓವರ್ 49 ರನ್ ಗಳಿಸಿತು ನಂತರ ಬ್ಯಾಟಿಂಗ್ ಆರಂಭಿಸಿದ 8 ವಂಡರ್ಸ ಕ್ರಿಕೆಟರ್ಸ್ 48 ರನ್ ಗಳಿಸಿತು.

ನೆಲ್ಲಿಗೆದ್ದೆ ಪ್ರೀಮಿಯರ್ ಲೀಗಿನ ಎರಡನೇ ಆವೃತ್ತಿಯಲ್ಲಿ ವಿನೋದ್ ಭಟ್ ನೇತೃತ್ವದ ಪ್ರಸಿಧ್ಧಿ ಕ್ರಿಕೆಟರ್ಸ್ ಮೂಕಾಂಬಿಕಾ ಟ್ರೋಫಿ ಜಯಗಳಿಸಿತು ಹಾಗೂ ಶ್ರೀನಾಥ್ ಅಡಿಗ ನೇತೃತ್ವದ 8 ವಂಡರ್ಸ ಕ್ರಿಕೆಟರ್ಸ್ ದ್ವಿತೀಯ ಸ್ಥಾನ ಗೆದ್ದುಕೊಂಡಿತು.

ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಆಟಗಾರರಾಗಿ ಕಿರಣ್, ಸರಣಿಯ ಉತ್ತಮ ಎಸೆತಗಾರರಾಗಿ ಅರ್ಜುನ್, ಉತ್ತಮ ದಾಂಡಿಗನಾಗಿ ಕಾಳಿದಾಸ ಮತ್ತು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕಿರಣ್ ಪಡೆದುಕೊಂಡರು.

Call us

Leave a Reply

Your email address will not be published. Required fields are marked *

10 − three =