ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ನಾಲ್ಕೂವರೆ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಫಲಾನುಭವಿಗಳಿಗೆ ಈವರೆಗೆ ಸುಮಾರು 2,000 ಕೋಟಿ ಅನುದಾನ ರಾಜ್ಯ ಸರಕಾರದಿಂದ ಬಿಡುಗಡೆಗೊಂಡಿದ್ದು, ಈ ಪೈಕಿ ಬಹುಪಾಲು ಕಾಮಗಾರಿಗಳು ಪೂರ್ಣಗೊಂಡಿವೆ, ಇನ್ನಿತರ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಬೈಂದೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಇಲಾಖಾವಾರು ವಿವರ ಬಿಡುಗಡೆ ಮಾಡಿದರು. ಲೋಕೋಪಯೋಗಿ ಇಲಾಖೆಯಿಂದ 178.22 ಕೋಟಿ, ಸಣ್ಣ ನೀರಾವರಿ ಇಲಾಖೆ 50.34 ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಗ್ರಾಮೀಣಾಭಿವೃದ್ದಿ ಇಲಾಖೆ 45.11 ಕೋಟಿ, ವರಾಹಿ ನಿರಾವರಿ ನಿಗಮ 41.98 ಕೋಟಿ, ಕರಾವಳಿ ಪ್ರಾಧಿಕಾರ 1.45 ಕೋಟಿ, ಬಂದರು ಮತ್ತು ಮೀನುಗಾರಿಕಾ ಇಲಾಖೆ 241.45 ಕೋಟಿ, ಸಮಾಜ ಕಲ್ಯಾಣ ಇಲಾಖೆ 8.12 ಕೋಟಿ, ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆ (ಐ.ಟಿ.ಡಿ.ಪಿ) 37.19, ಕರ್ನಾಟಕ ರಸ್ತೆ ಸಾರಿಗೆ ನಿಗಮ 17.19 ಕೋಟಿ, ಪ್ರವಾಸೋದ್ಯಮ ಇಲಾಖೆ 12.58, ಗ್ರಾಮ ವಿಕಾಸ ಯೋಜನೆ 9.75 ಕೋಟಿ, ಎಡಿಬಿ ನೆರವಿನ ಯೋಜನೆ 92.23 ಕೋಟಿ, ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ) 63.49, ಮಲೆನಾಡು ಪ್ರದೇಶಾಬಿವೃದ್ದಿ ಯೋಜನೆ 1.58 ಕೋಟಿ, ಡಾ/ ಅಂಬೇಡ್ಕರ್ ಅಬಿವೃದ್ದಿ ನಿಗಮ (ವೈಯಕ್ತಿಕ ಸಾಲ ಸಹಾಯಧನ) 3.08 ಕೋಟಿ, ಡಾ. ದೇವರಾಜ್ ಅರಸು ಅಭಿವೃದ್ದಿ ನಿಗಮ (ವೈಯಕ್ತಿಕ ಸಾಲ ಸಹಾಯಧನ) 5.28 ಕೋಟಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿ. (ವೈಯಕ್ತಿಕ ಸಾಲ ಸಹಾಯಧನ) 10.50 ಕೋಟಿ, ದಾರ್ಮಿಕ ಕ್ಷೇತ್ರ ಅಬಿವೃದಿಗೆ 2.29, ಕಾಮಗಾರಿಳಿಗೆ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಡೆದಿದೆ. ಜನವರಿ 8ಕ್ಕೆ ಮುಖ್ಯಂತ್ರಿಗಳು ವಿವಿಧ ಇಲಾಖೆಗಳ ಒಟ್ಟು 490.97 ಕೋಟಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು ವಿಧಾಸಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3180 ಫಲಾನಿಭವಿಗಳಿಗೆ 94ಸಿ ಹಕ್ಕು ಪತ್ರ, 524 ಎನ್.ಸಿ.ಆರ್ ಹಕ್ಕು ಪತ್ರ ವಿತರಿಸಲಾಗಿದೆ. 3926 ಬಸವ ವಸತಿ ಮನೆ ಹಾಗೂ 503 ಮೀನುಗಾರಿಕಾ ಮನೆಗಳನ್ನು ಮಂಜೂರು ಮಾಡಲಾಗಿದೆ. ಕ್ಷೇತ್ರದ 3664 ವಸತಿಗಳ 104.94 ಕೋಟಿ ವಸತಿ ಸಾಲ ಮತ್ತು ಬಡ್ಡಿ ಮನ್ನ ಮಾಡಲಾಗಿದೆ, 43637 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ ಎಂದವರು ವಿವರಿಸಿದರು.
ಸಂಸದರ ಆಪ್ತ ಕಾರ್ಯದರ್ಶಿ ಆರೋಪಕ್ಕೆ ಉತ್ತರಿಸಲಾರೆ:
ಕುಂದಾಪುರದಲ್ಲಿ ಸಂಸದರ ಕಾರ್ಯದರ್ಶಿ ನಡೆಸಿರುವ ಪತ್ರಿಕಾಗೋಷ್ಠಿಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವರು ಬೈಂದೂರು ಕ್ಷೇತ್ರದಲ್ಲಿ ರಾಜ್ಯ ಸರಕಾರದ ಹಣದಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಕೇಂದ್ರ ಸರಕಾರದಿಂದ ಬಿಡುಗಡೆಗೊಂಡಿರುವುದು ಎಂದು ಬಿಂಬಿಸಿ ಸಂಸದರ ಆಪ್ತ ಕಾರ್ಯದರ್ಶಿ ನಡೆಸಿರುವ ಪತ್ರಿಕಾಗೋಷ್ಠಿ ಪತ್ರಿಕಾಗೋಷ್ಠಿಯ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲ. ಸಂಸದರೇ ಕೇಂದ್ರ ಸರಕಾರದ ಅನುದಾನದಲ್ಲಿ ಹಣ ಬಿಡುಗಡೆಗೊಳಿಸಿದ್ದೇವೆ ಎಂದು ಹೇಳಿದರೆ ಬಳಿಕ ತಾನು ದಾಖಲೆ ಸಮೇತ ಅಭಿವೃದ್ಧಿ ನಡೆಸಿರುವುದು ಯಾರು ಎಂಬುದನ್ನು ಬಯಲು ಮಾಡುತ್ತೇನೆ. ಯಾವ ಸರಕಾರದ ಹಣದಿಂದ ಅಭಿವೃದ್ಧಿ ನಡೆದಿದೆ ಎಂಬುದನ್ನು ಮಾಹಿತಿ ಹಕ್ಕಿನ ಮೂಲಕ ಸ್ಪಷ್ಟಪಡಿಸಿಕೊಳ್ಳಲಿ ಎಂದರು.
ಸಂಸದರ ಆದರ್ಶ ಗ್ರಾಮಕ್ಕೆ ಹತ್ತಾರು ಕೋಟಿ ವಿನಿಯೋಗಿಸಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಎಲ್ಲಿ ಕೆಲಸ ಆಗಿದೆ ಎಂಬುದನ್ನು ತಿಳಿಸಬೇಕಿದೆ. ಆಸ್ಕರ್ ಫೆರ್ನಾಂಡಿಸ್ ಅವರು ದತ್ತು ತೆಗೆದುಕೊಂಡಿರುವ ಸಂಸದರ ಗ್ರಾಮ ಶಿರೂರು ಹಾಗೂ ಬಿ.ಎಸ್.ವೈ ಅವರು ದತ್ತು ತೆಗೆದುಕೊಂಡಿರುವ ಸಂಸದರ ಗ್ರಾಮವನ್ನು ತುಲನೆ ಮಾಡಿ ನೋಡಿ ಏನು ಅಭಿವೃದ್ಧಿ ಆಗಿದೆ ಎಂಬುದು ತಮಗೆ ತಿಳಿಯುತ್ತೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಕಾರ್ಯದರ್ಶಿ ನಾಗರಾಜ ಗಾಣಿಗ, ತಾಪಂ ಸದಸ್ಯ ಜಗದೀಶ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
► ಜ.8ರಂದು ಬೈಂದೂರಿನಲ್ಲಿ ಮುಖ್ಯಮಂತ್ರಿಗಳಿಂದ 490 ಕೋಟಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ – http://kundapraa.com/?p=27126
► ಕೇಂದ್ರದ ಅನುದಾನಕ್ಕೆ ರಾಜ್ಯದ ಹೆಸರು: ಬಿಎಸ್ವೈ ಆಪ್ತ ಕಾರ್ಯದರ್ಶಿ ಆರೋಪ – http://kundapraa.com/?p=27115