ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾಜಿ ಸಂಸದ ಮತ್ತು ಸಮಾಜ ಸೇವಕ ದಿ| ಐ.ಎಂ ಜಯರಾಮ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಐ ಎಂ ಜೆ ಫೌಂಡೇಶನ್ ವತಿಯಿಂದ, ಎಂ ಐ ಟಿ ಕುಂದಾಪುರ ಕಾಲೇಜಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ. 20000 ದಿಂದ ರೂ. 65000 ವರೆಗೆ ಸ್ಕಾಲರ್ಶಿಪ್ ದೊರೆಯಲಿದೆ.
ಈ ಸೌಲಭ್ಯವನ್ನ ಪಡೆಯಲು ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಐ ಎಂ ಜೆ ಫೌಂಡೇಶನ್ ನಡೆಸುವ ಕೌನ್ಸೆಲಿಂಗ್ ನಲ್ಲಿ ಭಾಗವಹಿಸ ಬೇಕಾಗುತ್ತದೆ. ಕೌನ್ಸೆಲಿಂಗ್ ನ ಸಂದರ್ಶನದಲ್ಲಿ ಅರ್ಹತೆ ಮತ್ತು ಆದಾಯದ ದಾಖಲೆ ಪರಿಗಣಿಸಿ ಸ್ಕಾಲರ್ಷಿಪ್ ಹಣವನ್ನ ಅಂತಿಮಗೊಳಿಸಲಾಗುವುದು. ಲಾಕ್ ಡೌನ್ ಸಮಯದಲ್ಲಿ ನಷ್ಟ ಅನುಭವಿಸಿದ ಹೆಚ್ಚಿನ ಪೋಷಕರಿಗೆ ಮಕ್ಕಳ ಫೀಸು ಕಟ್ಟಲು ಫೌಂಡೇಶನ್ ಕೊಡುತ್ತಿರುವ ಈ ಸೌಲಭ್ಯ ಬಹಳಷ್ಟು ಸಹಕಾರಿಯಾಗಲಿದೆ.
ಕೌನ್ಸೆಲಿಂಗ್ ಹಾಜರಾಗುವುದರಿಂದ ಸ್ಕಾಲರ್ಷಿಪ್ ಜೊತೆಯಲ್ಲಿ ಶಿಕ್ಷಣ ಸಾಲ, ಸರ್ಕಾರದಿಂದ ಸಿಗುವ ಸವಲತ್ತುಗಳು, ಪ್ಲೇಸ್ಮೆಂಟ್, ಮತ್ತು ಉನ್ನತ ವ್ಯಾಸಂಗ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಜ್ಞರ ಮೂಲಕ ಕೊಡಲಾಗುವುದು.
ಐ ಎಂ ಜೆ ಫೌಂಡೇಶನ್ ಸ್ಕಾಲರ್ಷಿಪ್ ಇಂದ ನನ್ನ ಇಂಜಿನಿಯರ್ ಆಗುವ ಕನಸು ನನಸಾಯ್ತು. ಕಾಲೇಜಿನ ಪ್ರಾಧ್ಯಾಪಕರ ಪ್ರೋತ್ಸಹ ಮತ್ತು ಉತ್ತಮ ಶಿಕ್ಷಣ ದಿಂದ ಕ್ಯಾಂಪಸ್ ನಲ್ಲೆ ಉದ್ಯೋಗ ಲಭಿಸುವಂತಾಯ್ತು. – ಗುರುಚರಣ್ ಬೈಂದೂರು, ಸಾಫ್ಟ್ ವೆರ್ ಇಂಜಿನಿಯರ್, ತಂತ್ರಜ್ಞಾನ ಕಂಪನಿ, ಬೆಂಗಳೂರು.
ನಾನು ಐ ಎಂ ಜೆ ಫೌಂಡೇಶನ್ ಕೌನ್ಸೆಲಿಂಗ್ನಲ್ಲಿ ಭಾಗಿಯಾಗಿದೆ. ಅಲ್ಲಿ ನನಗೆ ತಜ್ಞರಿಂದ ಉತ್ತಮ ಮಾರ್ಗದರ್ಶನ ದೊರೆಯಿತು. ಹಾಗೆಯೆ ನನ್ನ ಸಂಪೂರ್ಣ ಶುಲ್ಕವನ್ನ ಫೌಂಡೇಶನ್ ಕಡೆಯಿಂದ ಭರಿಸಲಾಯಿತು. – ರಶ್ಮಿತಾ ಪೂಜಾರಿ, ಡಿಸೈನ್ ಇಂಜಿನಿಯರ್, ಆರ್. ಜಿ. ಬಿ. ಎಸ್. ಐ. ಬೆಂಗಳೂರು.
-
ನೊಂದಾಯಿಸಿಕೊಳ್ಳಲು ಕರೆ ಮಾಡಿ – 6364220118