ಜ.19ರಿಂದ ಕರಾವಳಿ ಕರ್ನಾಟಕದ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರಾವಳಿ ಕರ್ನಾಟಕದ ಮೊದಲ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸಂಚಾರ ಜ.19ರಿಂದ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲು ಸಂಚಾರವಿರಲಿದೆ.

Call us

Click Here

Click here

Click Here

Call us

Visit Now

Click here

ಈಗಾಗಲೇ ಇರುವ ಯಶವಂತಪುರ ಕಾರವಾರ (16515/16516) ಎಕ್ಸ್‌ಪ್ರೆಸ್ ಹಗಲು ರೈಲು ಇನ್ನು ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲಾಗಿ ಪರಿವರ್ತನೆಗೊಳ್ಳಲಿದೆ. ಮುಂದೆ ಡಿಸೆಲ್ ಇಂಜಿನ್ ಜೋಡಿಸಿಕೊಂಡು ಯಶವಂತಪುರದ ತನಕ ಸಂಚಾರ ಮುಂದುವರಿಲಿದೆ.

ಕಾರವಾರ – ಮುರುಡೇಶ್ವರ – ಬೈಂದೂರು – ಕುಂದಾಪುರ – ಉಡುಪಿ – ಮಂಗಳೂರು ಜಂಕ್ಷನ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಯಡಿಯೂರು ಮಾರ್ಗದಲ್ಲಿ ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ಸಂಚರಿಸಲಿದೆ.

ಕಾರವಾರದಿಂದ ಮಂಗಳೂರು ಜಂಕ್ಷನ್ ತನಕದ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಮಂಗಳೂರು ಜಂಕ್ಷನ್’ನಿಂದ ಯಶವಂತಪುರದ ತನಕ ಇ-ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಿಸಲಾಗುತ್ತದೆ. ಡೀಸೆಲ್ನಿಂದ ಉಂಟಾಗುತ್ತಿದ್ದ ವಾಯುಮಾಲಿನ್ಯವನ್ನು ಇ-ಲೋಕೋಮೋಟಿವ್ ತಗ್ಗಿಸಲಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Call us

Leave a Reply

Your email address will not be published. Required fields are marked *

4 × 5 =