ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರದ ಅಭ್ಯರ್ಥಿಯಗಿ ಬಿಜೆಪಿ ಪಕ್ಷದಿಂದ ಮಾಲಿನಿ ಕೆ. ಸ್ವರ್ಧಿಸುತ್ತಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಸೌಮ್ಯ ಸ್ವಭಾವದ ಮಾಲಿನಿ ಅವರು ಸ್ತ್ರೀಶಕ್ತಿ ಸಂಘಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ ಸುದ್ದಿ
ಸಾಮಾಜಿಕ ಬದುಕಿನಲ್ಲಿ ಒಂದಿಷ್ಟು ಸೇವೆಗೈಯುವ ಅವಕಾಶಕ್ಕಾಗಿ ಪಕ್ಷದಿಂದಲೇ ಬಂದ ಆಹ್ವಾನವನ್ನು ಸ್ವೀಕರಿಸಿ ಈ ಮೊದಲ ಭಾರಿಗೆ ರಾಜಕೀಯ ಪ್ರವೇಶಿಸುತ್ತಿದ್ದಾರೆ. ರಾಮಕ್ಷತ್ರೀಯ ಸಮುದಾಯದವರಾದ ಮಾಲಿನಿ ಅವರು ಮಯ್ಯಾಡಿಯ ಕುಳ್ಳುಗರಡಿ ಮನೆ ಸುಬ್ರಾಯ ಕೆ. ಅವರ ಧರ್ಮಪತ್ನಿ.