Kundapra.com ಕುಂದಾಪ್ರ ಡಾಟ್ ಕಾಂ

ಬಾಳೆಕುದ್ರು ಶ್ರೀಮಠದಲ್ಲಿ ಸ್ವಾಮೀಜಿಯವರನ್ನು ಭೇಟಿಯಾದ ವಿಪಕ್ಷ ನಾಯಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬಾಳೆಕುದ್ರು ಶ್ರೀಮಠದಲ್ಲಿ ನೃಸಿಂಹಾಶ್ರಮ ಸ್ವಾಮೀಜಿಯವರ ಚಾತುರ್ಮಾಸ್ಯ ವೃದಲ್ಲಿರುವ ಶ್ರೀಗಳವರನ್ನು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಭೇಟಿಯಾಗಿ ಗುರು ನಮನ ಸಲ್ಲಿಸಿದರು.

ಈ ಸಂದರ್ಭ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಹಲವು ಸಾಧನೆಗಳ ಪರಿಚಯದ ಶುದ್ಧ ನಡೆ ಸೂಕ್ತ ವಿಕಾಸ ಪುಸ್ತಕವನ್ನು ಶ್ರೀಗಳವರೀಗೆ ಶ್ರೀಗಳವರಿಗೆ ನೀಡಿದರು.

ಐರೋಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೇಬಿ ಕೃಷ್ಣ ಪೂಜಾರಿ. ಸದಸ್ಯರಾದ ಇಂದಿರಾ ಪೂಜಾರಿ, ರಾಜೇಶ್ ಪೂಜಾರಿ, ಪ್ರೇಮ ಆಚಾರ್ಯ , ದಿನೇಶ್ ಅಮೀನ್ , ಬಿಜೆಪಿಯ ಮುಖಂಡರಾದ ವಿಠಲ್ ಪೂಜಾರಿ ಉಪಸ್ಥಿತರಿದ್ದರು.

Exit mobile version