Kundapra.com ಕುಂದಾಪ್ರ ಡಾಟ್ ಕಾಂ

ಲಾಕ್‌ಡೌನ್: ಸೌಡ ಮಧುರ ಯುವಕ ಮಂಡಲದಿಂದ ವಿನೂತನ ಸೇವೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಸಂದರ್ಭ ತಾಲೂಕಿನ ಸೌಡ ಪರಿಸರದ ಜನರಿಗೆ ನೆರವಾಗುವ ಉದ್ದೇಶದಿಂದ ಸೌಡ ಮಧುರ ಯುವಕ ಮಂಡಲ (ರಿ) ಸದಸ್ಯರುಗಳು ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ ತರಕಾರಿ, ಹಾಲು, ಮೊಸರನ್ನು ಮಾರುಕಟ್ಟೆ ಬೆಲೆಯಲ್ಲಿಯೇ ವಿತರಿಸಲು ಯುವಕ ಮಂಡಲದಿಂದ ತಾತ್ಕಾಲಿಕ ಅಂಗಡಿ ತೆರೆದಿದ್ದಾರೆ. ಅಷ್ಟೇ ಅಲ್ಲದೇ ವಿದ್ಯುತ್ ಸಮಸ್ಯೆ, ಮೆಡಿಸಿನ್, ಮೊಬೈಲ್ ರೀಚಾರ್ಜ್ ಹಾಗೂ ಜನರು ಪಡಿತರ ಪಡೆಯುವುದಕ್ಕಾಗಿ ನೆರವಾಗುವ ಪ್ರಯತ್ನದಲ್ಲಿ ಉತ್ಸಾಹಿ ಯುವಕರಿದ್ದಾರೆ.

ಸೌಡ ಪರಿಸರದವರು ನಿಗದಿಪಡಿಸಿದ ದಿನಾಂಕದಂದು ಸೊಸೈಟಿಯಲ್ಲಿ ರೇಷನ್ ತೆಗೆದುಕೊಳ್ಳಲು ಸೊಸೈಟಿಗೆ ತೆರಳಿದರೆ ಅವರಿಗೆ ಉಚಿತವಾಗಿ ಸಾಗಾಟ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮೂರು ದಿನಗಳ ಕಾಲ ವಿವಿಧ ಭಾಗಗಳ ಜನರಿಗೆ ರೇಷನ್ ಪಡೆದುಕೊಳ್ಳಲು ಸೂಚಿಸಲಾಗಿದೆ. ಉಳಿದಂತೆ ಅಗತ್ಯ ತರಕಾರಿ, ಹಾಲು ಮೊಸರು ಕೊಂಡುಕೊಳ್ಳಲು ನೆರವಾಗಿರುವುದಲ್ಲದೇ ವಿದ್ಯುತ್ ಸಮಸ್ಯೆಯಿದ್ದರೇ, ಮೊಬೈಲ್ ರೀಚಾರ್ಜ್ ಮಾಡುವುದಿದ್ದರೇ, ಇನ್ಸುರೆನ್ಸ್ ವಿದ್ಯುತ್ ಬಿಲ್ ಕಟ್ಟಬೇಕಿದ್ದರೇ, ಜೌಷಧಿಗಳ ಅಗತ್ಯವಿದ್ದರೆ ಎಲ್ಲದಕ್ಕೂ ಮಧುರ ಯುವಕ ಮಂಡಲದ ಯುವಕರುಗಳು ನೆರವಿಗೆ ಬರಲಿದ್ದಾರೆ.

ಸಂಸ್ಥೆಯ ಗೌರವಾಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ಉದಯ ಐತಾಳ್ ಹಾಗೂ ಕಾರ್ಯದರ್ಶಿ ರಂಜಿತ್ ಸೌಡ ಅವರ ನೇತೃತ್ವದಲ್ಲಿ ಯುವ ಪಡೆ ಈ ತುರ್ತು ಅಗತ್ಯ ಸೇವೆಗಳನ್ನು ಪೂರೈಸಲು ಕೈಜೋಡಿಸಿದೆ.  /ಕುಂದಾಪ್ರ ಡಾಟ್ ಕಾಂ ಸುದ್ದಿ/

ಮಧುರ ಯುವಕ ಮಂಡಲದ ವಿವಿಧ ಸೇವೆಗಳು:

ತರಕಾರಿ ,ಹಾಲು . ಮೊಸರು ಗಳನ್ನು ಮಾರುಕಟ್ಟೆಯ ದರದಲ್ಲೆ ವಿತರಿಸಿಲು ತಾತ್ಕಾಲಿಕ ಅಂಗಡಿ ತೆರೆಯಲಾಗಿದೆ.

1. ತರಕಾರಿ ಮತ್ತು ಹಾಲು ಅಂಗಡಿ:
(ಬಸವ ಮೋಗವೀರರ ಮನೆಯ ಬಳಿ)
ಶರತ : 9686216942
ಮಂಜ :8197234504

2. ವಿದ್ಯುತ್‌ ಸಮಸ್ಯೆ:
ಸುರೇಶ ದೇವಾಡಿಗ :9611895388

3 . ಮೆಡಿಸಿನ್:
ಹರಿ ಪ್ರಸಾದ ಶೆಟ್ಟಿ
9448381288

4. ಮೊಬೈಲ್ ರೀಚಾರ್ಜ್, ಇನ್ಸೂರೆನ್ಸ ಕಂತು , ವಿದ್ಯುತ್ ಬಿಲ್ ಇತರ ಆನ್ಲೈನ್ ಸೇವೆ:
ಅಶೋಕ ಸೌಡ ಪೇಟೆ
9902594529

5. ಪಡಿತರ:
ರೇಶನ ಅಂಗಡಿಗೆ ಪಡಿತರ ಬಂದಿದ್ದು , ಪಡಿತರ ತೆಗೆದುಕೊಳ್ಳಲು ಕುಟುಂಬದ’ ಒಬ್ಬರು ಸದಸ್ಯರು 0TP ಇರುವ ಮೊಬೈಲ್ ನೊಂದಿಗೆ ನಿಗದಿಪಡಿಸಿದ ಸಮಯಕ್ಕೆ ರೇಶನ್ ಅಂಗಡಿಗೆ’ ಬಂದರೆ ಉಚಿತವಾಗಿ ಸಾಗಾಟ ವ್ಯವಸ್ಥೆ ಮಾಡಲಾಗಿದೆ.ಸಂಪರ್ಕ: ಫೆಡ್ರಿಕ್ ಒಲಿಕಲ್ ಹೌಸ್ – 9945131502
ರಂಜಿತ  – 9620433553

ದಿನಾಂಕ 8-4-2020 ಬುದವಾರ ಬೆಳಿಗ್ಗೆ 9 ಗಂಟೆಗೆ
ಸೌಡ ಪೇಟೆಯಿಂದ ಬಾಗಾಳ ಗುಡ್ಡೆ ಯಿಂದ ಜನ್ನಾಡಿ ಪೇಟೆ ತನಕ
ಕರೆಮಾಡಿ :
ಗೋಪಾಲ ಮೋಗವೀರ – 8277654479
ಪ್ರಶಾಂತ ದೇವಾಡಿಗ- 9845957006

ದಿನಾಂಕ 8-4-2020 ಬುದವಾರ ಮಧ್ಯಾಹ್ನ 3 ಗಂಟೆಗೆ
ಸೌಡ ಗುಡ್ಡೆ , ಸಾಂತಮಕ್ಕಿ ,ಗಾಣಮಕ್ಕಿ
ಕರೆ ಮಾಡಿ : ಸಂತೋಷ ದೇವಾಡಿಗ- 9148210560
ಶರತ ಮಡಿವಾಳ- 9535549894

ದಿನಾಂಕ 9-4-2020 ಗುರುವಾರ ಬೆಳಗ್ಗೆ’ 9 ಗಂಟೆಗೆ
ಜಡ್ಡಿನಬೈಲು , ಕೊಟೆಮಕ್ಕ
ಕರೆ ಮಾಡಿ: ಶ್ರೀನಿವಾಸ ಪೂಜಾರಿ ಜಡ್ಡಿನಬೈಲು – 9164944524

9-4-2020 ಗುರುವಾರ ಸಂಜೆ 3 ಗಂಟೆಗೆ
ಮಾಲಾಡಿ ,ಕೆರಾಣಮನೆ ,ಹರಡೆ ಜೆಡ್ಡು , ಗಾಣಮಕ್ಕಿ
ಕರೆ ಮಾಡಿ
ರಂಜಿತ ಕೆರಾಣಮನೆ : 9741751965
ದೀಕ್ಷಿತ್ ಗಾಣಮಕ್ಕಿ – 9164189745

10-4-2020 ಶುಕ್ರವಾರ ಬೆಳಗ್ಗೆ 9 ಗಂಟೆಗೆ
ಜನ್ನಾಡಿ ಪ. ಜಾತಿ ಕಾಲೋನಿ (ಡಿಪೊ ಹತ್ತಿರ ) ಜನ್ನಾಡಿ ಮತ್ತು ಮಣೆಗೇರಿ S T ಕಾಲೋನಿ ಮತ್ತು ಜನ್ನಾಡಿ
ಕರೆ ಮಾಡಿ
ರಾಜು ಜನ್ನಾಡಿ – 9481571461
ಸುರೇಂದ್ರ ಮಡಿವಾಳ – 8971410488

10-4-2020 ಶುಕ್ರವಾರ 3 ಗಂಟೆಗೆ
ಮೂಡ್ಲಮಕ್ಕಿ , ಮಣಿಗೆರಿ
ಕರೆಮಾಡಿ :
ಅಣ್ಣಪ್ಪ ಕುಲಾಲ- 9481571461
ದೀಕ್ಷಿತ್ – 9164189745

Exit mobile version