Kundapra.com ಕುಂದಾಪ್ರ ಡಾಟ್ ಕಾಂ

ಗ್ರೇಟ್ ಮಲ್ನಾಡ್ ಚಾಲೆಂಜ್: 8 ದಿನ, 700ಕಿ.ಮೀ ಸೈಕಲ್ ಪಯಣ. ಮರವಂತೆಯಲ್ಲಿ ಸಮಾಪನ

ಕುಂದಾಪುರ: ನಗರಗಳಲ್ಲಿ ಬದುಕುವ ಉತ್ಸಾಹಿಗಳಿಗೊಂದು ಹೊಸ ಹುರುಪಿ ನೀಡಿ, ಪರಿಸರ ಸಂರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಒಂದಿಷ್ಟು ಮಂದಿ ಸೈಕಲ್ ಸವಾರಿಗೆ ಹೊರಟಿದ್ದರು. ಬೆಂಗಳೂರು ನಗರನ್ನು ಬಿಟ್ಟು ಸೈಕಲ್ ಮೂಲಕವೇ ತಿರುಗಾಟಕ್ಕೆ ಹೊರಟ ಯುವಕರ ತಂಡ ಬೆಟ್ಟ ಗುಡ್ಡ, ಕಾಡು ಗಿರಿಧಾಮಗಳನ್ನು ಹಾದು ಮರವಂತೆಯ ಸಮದ್ರದಂಚಿಗೆ ತಲುಪುವ ಮೂಲಕ ಟಾಸ್ಕ್ ಪೂರ್ಣಗೊಳಿಸಿದ್ದಾರೆ.

[quote font_size=”14″ bgcolor=”#ffffff” bcolor=”#81d742″ arrow=”yes” align=”right”]ಐಸೈಕಲ್ ಕುರಿತು:
ಐಸೈಕಲ್ ಬೆಂಗಳೂರಿನಲ್ಲಿ ಮುಂಚೂಣಿಯಲ್ಲಿರುವ ಸೈಕ್ಲಿಂಗ್ ಈವೆಂಟ್ ಸಂಸ್ಥೆ. ಬೆಂಗಳೂರಿನ ನೂರಾರು ಯುವ ಸೈಕಲ್ ಉತ್ಸಾಹಿಗಳು ಸೈಕ್ಲಿಂಗ್‌ನ ಉಪಯೋಗದ ಜೊತೆಗೆ ಅದರ ಅದ್ಭುತ ಮೋಜನ್ನು ಸ್ವತಃ ಮನಗಾಣಿಸುವ ಜೊತೆಗೆ ಇತರರಿಗೂ ಅದರ ಚಮತ್ಕಾರವನ್ನು ಮನವರಿಕೆ ಮಾಡಲು, ತಮ್ಮ ಸಂತೋಷವನ್ನು ಸಮಾನ ಮನಸ್ಕರರ ಜೊತೆಗೆ ಹಂಚಿಕೊಳ್ಳಲು ಆರಂಭಿಸಿದ ಸಂಸ್ಥೆಯೇ ಐಸೈಕಲ್. ಸೈಕಲ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಐಸೈಕಲ್ ಸಂಸ್ಥೆ ಸೈಕ್ಲಿಂಗ್ ಗಾಗಿ ನುರಿತ ಸಿಬ್ಭಂಧಿಗಳನ್ನು ಹೊಂದಿದೆ.[/quote]

ಸೈಕಲ್ ಸವಾರಿ ಬಯಸುವ ಉತ್ಸಾಹಿಗಳಿಗಾಗಿ ‘ಗ್ರೇಟ್ ಮಲ್ನಾಡ್ ಚಾಲೆಂಜ್-2015’ (ಎಸ್‌ಬಿಐ-ಜಿಎಂಸಿ 2015) ಸೈಕ್ಲಿಂಗ್ ಚಾಲೆಂಜ್ ಸ್ವರ್ಧೆ ಆಯೋಜಿಸಲಾಗಿತ್ತು. ‘ಐಸೈಕಲ್’ ಸೈಕಲ್ ಪೂರೈಕೆದಾರ ಕಂಪೆನಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಇದರ ನೇತೃತ್ವ ವಹಿಸಿಕೊಂಡಿತ್ತು. ಅಕ್ಟೋಬರ್ 31 ರಂದು ಮಡಿಕೇರಿ ಪರ್ವತ ಪ್ರದೇಶದಿಂದ ಆರಂಭವಾದ ಈ ಚಾಲೆಂಜ್‌ನಲ್ಲಿ ಭಾಗವಹಿಸಿದ 40ಕ್ಕೂ ಹೆಚ್ಚು ಸೈಕಲ್ ಉತ್ಸಾಹಿಗಳು ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ದಾಟಿ, ಎತ್ತರದ ಶಿಖರವಾದ ಮುಳ್ಳೆಯನಗಿರಿ ತಲುಪಿ ಬಳಿಕ ಸಕಲೇಶಪುರ ಗಿರಿಧಾಮವನ್ನು ಹಾದು, ಅರಣ್ಯಗಳು ನಿಬಿಡವಾದ ತೀರ್ಥಹಳ್ಳಿಯ ಮಾರ್ಗವಾಗಿ ಸಂಚರಿಸಿ ಮರವಂತೆ ತಲುಪಿತು. ಒಟ್ಟು 8 ದಿನಗಳಲ್ಲಿ 700 ಕಿ.ಮೀ. ದೂರವನ್ನು ಕ್ರಮಿಸಿ ಸತತ ಆರನೇ ವರ್ಷದ ಈ ಸ್ವರ್ಧೆಗೆ ಅಂತ್ಯ ಹಾಡಲಾಗಿತು. (ಕುಂದಾಪ್ರ ಡಾಟ್ ಕಾಂ ವರದಿ)

ಮರವಂತೆ ಟರ್ಟಲ್ ಬೇ ರೆಸಾರ್ಟ್ ನಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಐಸೈಕಲ್‌ನ ಸಂಸ್ಥಾಪಕ ಮಂಜೇಶ್ ಚಂದ್ರಶೇಖರನ್ ಮಾತನಾಡಿ ಜನರಿಗೆ ಪರಿಸರ ಸ್ನೇಹಿ ಸೈಕ್ಲಿಂಗ್ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವ ಜೊತೆಗೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು ಎಂದು ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಬಿಚ್ಚಿಟ್ಟರು. (ಕುಂದಾಪ್ರ ಡಾಟ್ ಕಾಂ ವರದಿ)

6ನೇ ಆವೃತ್ತಿಯಲ್ಲಿ ಗ್ರೇಟ್ ಮಲೆನಾಡು ಚಾಲೆಂಜ್-2015ರಲ್ಲಿ ಸಂದೀಪ ಪ್ರಭು, ನಾಗೇಶ್ ಸಿಂಗ್, ವೀಣಾ ಮಣಿಕಂಠ, ಶ್ರೀರಾಜ್, ನೀಲಮೇಘಶ್ಯಾಮ್ ವಿಜೇತರಾದರು. ಎಸ್‌ಬಿಐ ನ ಮುಖ್ಯ ಮ್ಯಾನೇಜರ್ ಎಂ.ಎಸ್. ಶೆಣೈ ಹಾಗೂ ಸಹಾಯಕ ಜನರಲ್ ಮ್ಯಾನೇಜರ್ ನೀನಾ ಕೊಯಿಲೊ ಹಾಗೂ ಮಿಸ್ ಇಂಡಿಯಾ 2015ರ ಫೈನಲಿಸ್ಟ್ ಪ್ರಾರ್ಥನಾ ಸುಬ್ರಮಣಿಯನ್ ವಿಜೇತರನ್ನು ಪುರಸ್ಕರಿಸಿದರು.


 

Exit mobile version