ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶದಂತೆ ಕೋಟ ಅಮೃತೇಶ್ವರೀ ದೇಗುಲದಲ್ಲಿ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಲಾಗಿದ್ದು, ದೇಗುಲದ ಅರ್ಚಕರಾದ ಕೃಷ್ಣ ಜೋಗಿ ಗೋ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಬ್ರಾಯ ಜೋಗಿ, ಚಂದ್ರ ಆಚಾರ್, ಶಿವ ಪೂಜಾರಿ, ಸುಧಾ ಎ. ಪೂಜಾರಿ, ರತನ್ ಐತಾಳ್, ಜ್ಯೋತಿ ಡಿ. ಕಾಂಚನ್, ವ್ಯವಸ್ಥಾಪಕ ಗಣೇಶ್ ಹೊಳ್ಳ, ಹೈನುಗಾರ ಕುಟುಂಬದ ಮಹೇಶ್ ಕಂಭಾಶಿಮನೆ, ಭುಜಂಗ ಗುರಿಕಾರ, ರಮೇಶ್ ಪೂಜಾರಿ, ಸೋಮಶೇಖರ್, ಪ್ರಾಕರ್ ಐತಾಳ್, ಇತರರು ಇದ್ದರು.

