ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಮಂಡಲದ ವತಿಯಿಂದ ಹಿಂದೂ ಸಂಗಮದ ಶೋಭಯಾತ್ರೆ ಸಮಾವೇಶವು ವಿಜೃಂಬಣೆಯಿಂದ ಇತ್ತೀಚಿಗೆ ಜರಗಿತು.
ಹಿಂದೂ ಮುಖಂಡರಾದ ಶಿವರಾಮ ಉಡುಪ ಸಾಲಿಗ್ರಾಮ ಶೋಭಯಾತ್ರೆಗೆ ಚಾಲನೆ ನೀಡಿದರು. ವಿವಿಧ ಭಾಗಗಳಿಂದ ಆಗಮಿಸಿದ ಮಹಿಳಾ ಭಜನಾ ತಂಡ, ಮಕ್ಕಳ ಭಜನಾ ತಂಡ, ಪುರುಷ ಹಾಗೂ ಮಹಿಳಾ ಚಂಡೆ ಬಳಗದಿಂದ ಚಂಡೆ ವಾದನ, ಹಲವಾರು ಪುಟಾಣಿಗಳು ವೇಷಭೂಶಣಗಳಿಂದ ಕೂಡಿದ ಟ್ಯಾಬ್ಲೋ, ಶಿವಾಜಿ ಮೂರ್ತಿಯನ್ನು ಹೊತ್ತು ಭಾರತಾಂಭೆಯ ಭಾವಚಿತ್ರವನ್ನು ಹೊತ್ತ ವಾಹನ ರಥಗಳು ಶೋಭಯಾತ್ರೆಯಲ್ಲಿ ಕಂಡು ಬಂದವು.

ಸಾಲಿಗ್ರಾಮ ಬಸ್ಸು ನಿಲ್ದಾಣದಿಂದ ಆರಂಭಗೊಂಡ ಶೋಭಾಯಾತ್ರೆ ಶ್ರೀ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರವನ್ನು ತಲುಪಿತು.
ಸಭಾಕಾರ್ಯಕ್ರಮಕ್ಕೆ ಸಾಲಿಗ್ರಾಮ ದೇವಸ್ಥಾನದ ಪ್ರದಾನ ಅರ್ಚಕ ಜನಾರ್ದನ ಅಡಿಗ ಅವರು ಗೋ ಪೂಜೆಯ ಮೂಲಕ ಚಾಲನೆ ನೀಡಿದರು. ಸಮಾವೇಶದ ಸಭಾಧ್ಯಕ್ಷತೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಅಧ್ಯಕ್ಷ ಡಾ. ಕೆ.ಎಸ್. ಕಾರಂತ್ ವಹಿಸಿದ್ದರು.
ದಿಕ್ಸೂಚಿ ಭಾಷಣವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ್ ಅಜಿತ್ ಕುಕ್ಕುಂದೂರು ಹಿಂದೂ ಸಂಗಮದ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯರಾದ ಗುಲಾಬಿ ಹಂದಟ್ಟು, ಗುಂಡು ಪೂಜಾರಿ ಪಾರಂಪಳ್ಳಿ, ಪರಮೇಶ್ವರ ನಾಯರಿ ಸಾಲಿಗ್ರಾಮ, ಗಣಪತಿ ಶ್ಯಾನುಭೋಗ್ ಸಾಲಿಗ್ರಾಮ ಕೃಷ್ಣ ಮರಕಾಲ ಅಂಬಾಗಿಲುಕೆರೆ, ಸಾಲಿಗ್ರಾಮ ಮಂಡಲದ ಅಧ್ಯಕ್ಷ ಬಾಸ್ಕರ ಪೂಜಾರಿ ಕಾರ್ಕಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣ ಆಚಾರ್ಯ ಸ್ವಾಗತಿಸಿ, ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ್ ಕಾರ್ಕಡ ವಂದಿಸಿದರು.