Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಅಮೃತೇಶ್ವರಿ ದೇವಸ್ಥಾನ ನಾಗಮಂಡಲೋತ್ಸವ, ಮೂರು ದಿನಗಳಿಂದ ಹರಿದು ಬಂದ ಹೊರೆಕಾಣಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ಮಾ.1ರಂದು ನಡೆಯುವ ಏಕ ಪವಿತ್ರ ನಾಗಮಂಡಲೋತ್ಸವದ ಪೂರ್ವಬಾವಿಯಾಗಿ ಹೊರೆಕಾಣಿಕೆ ಸಮರ್ಪಣೆಯ ಸಂಭ್ರಮದ ಸತತ ಮೂರು ದಿನಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಹೊರೆಕಾಣಿಕೆ ಸಮರ್ಪಿಸಿದರು.

ಕೋಟ 14 ಗ್ರಾಮಗಳ ವತಿಯಿಂದ 3 ದಿನಗಳ ಕಾಲ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಸಲ್ಲಿಸುವ ಪ್ರಯಕ್ತ ಬುಧವಾರ, ಗುರುವಾರ, ಶುಕ್ರವಾರ  ಬೆಳಗ್ಗೆಯಿಂದ ಸಂಜೆಯವರೆಗೆ ಕೋಟ ಹದಿನಾಲ್ಕು ಗ್ರಾಮಗಳ ಹಾಡಿಕೆರೆ, ಅಚ್ಲಾಡಿ, ಬನ್ನಾಡಿ, ಹಿರೇದೇವಸ್ಥಾನಬೆಟ್ಟು, ಕೋಟತಟ್ಟು ಬಾರಿಕೆರೆ, ಅರ್ಚಕ ಯುವ ಸಂಘ ಕೋಟ,ತೆಕ್ಕಟ್ಟೆ ಗ್ರಾಮಸ್ಥರು, ಮಣೂರು ಪಡುಕರೆ, ಮೂಡುಗಿಳಿಯಾರು, ಹಂದಟ್ಟು, ಕೋಟ ಹೊಸಬೆಟ್ಟು, ಕಾಸನಗುಂದು, ಕೋಟತಟ್ಟು ಪಡುಕರೆ, ಸಾಲಿಗ್ರಾಮ ಕಾರ್ಕಡ,ಪಾರಂಪಳ್ಳಿ, ಕೋಡಿ ಗ್ರಾ.ಪಂ ವ್ಯಾಪ್ತಿ,ಕೋಟ ಪಡುಹರ್ತಟ್ಟು ಮೂಡುಹಡು, ಪಾಂಡೇಶ್ವರ, ಗೋಳಿಗರಡಿ, ಕೋಟತಟ್ಟು ಪಡುಕರೆ, ಐರೋಡಿ ಬಾಳೆಕುದ್ರು, ಮಣೂರು ಮಳಲುತಾಯಿ, ಬೆಟ್ಲಕ್ಕಿ ಚಿತ್ರಪಾಡಿ, ಕಾರ್ಕಡ, ಪಾರಂಪಳ್ಳಿ, ಕೋಟ ಅಮೃತೇಶ್ವರೀ ಮಹಿಳಾ ಮೀನುಗಾರರ ಸಹಕಾರಿ ಸಂಘ,ಆನೆಗುಡ್ಡೆ ಶ್ರೀವಿನಾಯಕ ದೇಗುಲ,ಮಣೂರು ಮಹಾಲಿಂಗೇಶ್ವರ ದೇಗುಲ ಹೀಗೆ ಅನೇಕ ಭಾಗಗಳಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು. ವಿವಿಧ ಭಾಗಗಳ ಗ್ರಾಮಸ್ಥರು ಹೊರೆಕಾಣಿಕೆಯಲ್ಲಿ ಸ್ವಯಂಸೇವಕರಾಗಿ ಭಾಗಿಯಾದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಸದಸ್ಯರಾದ ರತನ್ ಐತಾಳ್, ಸುಭಾಷ್ ಶೆಟ್ಟಿ ಗಣೇಶ್ ನೆಲ್ಲಿಬೆಟ್ಟು ಶಿವ ಪೂಜಾರಿ, ಸುಧಾ ಎ.ಪೂಜಾರಿ, ಸುಬ್ರಾಯ ಜೋಗಿ, ಜ್ಯೋತಿ ಕಾಂಚನ್, ಚಂದ್ರ ಆಚಾರ್, ಮಾಜಿ ಟ್ರಸ್ಟಿ ಚಂದ್ರ ಪೂಜಾರಿ, ಸುಂದರ್, ಸುಬ್ರಾಯ ಆಚಾರ್, ಸುಶೀಲಾ ಸೋಮಶೇಖರ, ಕೋಟ ದಿನೇಶ ಗಾಣಿಗ, ಶೇವಧಿ ಸುರೇಶ್ ಗಾಣಿಗ, ಭುಜಂಗ ಗುರಿಕಾರ, ಸುರೇಶ್ ಪಾಂಡೇಶ್ವರ, ರಾಮ ಬಂಗೇರ, ರಮೇಶ್ ಕಾರಂತ, ಜಿ. ವಿಠಲ ಪೂಜಾರಿ, ಕೆ.ವಿ ರಮೇಶ್ ರಾವ್, ಐರೋಡಿ ವಿಠ್ಠಲ ಪೂಜಾರಿ, ರಮೇಶ್ ಮೆಂಡನ್, ರಘು ಮಧ್ಯಸ್ಥ, ತಿಮ್ಮ ಕಾಂಚನ್, ರಂಜಿತ್ ಬಾರಿಕೆರೆ, ರಾಜು ಮರಕಾಲ, ಒಳಮಾಡು ಸೋಮಮರಕಾಲ, ಸುರೇಶ್ ಕಾಂಚನ್, ರಾಘವೇಂದ್ರ ಕಾಂಚನ್, ಗಣೇಶ್ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಮೊದಲಾದವರು ಉಪಸ್ಥಿತರಿದ್ದರು.

ವೈಭವದ ಹೊರೆಕಾಣಿಕೆ ಮೆರವಣಿಗೆ:
ಸತತ ಮೂರು ದಿನಗಳಿಂದ ಕೋಟದ ಹದಿನಾಲ್ಕು ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆಯ ಮೆರವಣಿಗೆಯಲ್ಲಿ ಚಂಡೆವಾದನ, ವಾದ್ಯ ಘೋಷ, ಕುಣಿತ ಭಜನೆ, ಕೀಲು ಕುದುರೆ, ತಟ್ಟಿರಾಯ ವಿವಿಧ ಸ್ಥಬ್ದ ಚಿತ್ರಗಳು ವಿಶೇಷವಾಗಿ ಗಮನ ಸೆಳೆದವು.

Exit mobile version