Site icon Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯ ಆಯ್ದ ಸಂಘಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ 3 ದಿನದ ತರಬೇತಿ ಕಾರ್ಯಾಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ
ಕೋಟ
: ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ನಿರ್ದೇಶಕರುಗಳಿಗೆ ತರಬೇತಿ ಅತ್ಯಗತ್ಯ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದರು.

ಅವರು ಮಾ.23ರಿಂದ 25ವರೆಗೆ ಕೋಟ ಸಹಕಾರಿ ವ್ಯವಸಾಯಕ ಸಂಘದ ಸಭಾಂಗಣದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯ ಮೈಸೂರು ತರಬೇತಿ ಕೇಂದ್ರ ಹಾಗೂ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಆಯ್ದ ಸಂಘಗಳ ಆಡಳಿತ ಮಂಡಳಿ ಸದಸ್ಯರ ಮೂರು ದಿನದ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದ.ಕ ಹಾಲು ಉತ್ಪಾದಕರ ಒಕ್ಕೂಟ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಜೊತೆಗೆ ಸ್ವಾಲವಲಂಬಿ ಬದುಕಿಗೆ ಮುನ್ನುಡಿ ಬರೆಯುವ ಕಾರ್ಯ ಮಾಡುತ್ತಿದೆ. ಈ ದಿಸೆಯಲ್ಲಿ ಹೈನುಗಾರರ ಸಮಸ್ಯೆಯನ್ನು ಪರಿಗಣಿಸಿ ಸ್ಥಳೀಯವಾಗಿ ತರಬೇತಿ ನಡೆಸಲಾಗುತ್ತಿದ್ದು, ಈ ತರಬೇತಿಯ ಸದುಪಯೋಗವನ್ನು ಪಡೆದು ಸಂಘದ ಆಡಳಿತವನ್ನು ಬಲಪಡಿಸುವಂತೆ ಸಲಹೆ ನೀಡಿದರಲ್ಲದೆ ಪ್ರಸ್ತುತ ಒಕ್ಕೂಟದ ಮುಖಾಂತರ ಪ್ರಸ್ತುತ ಲೀಟರ್ ಮೇ ತಿಂಗಳ ಅಂತ್ಯದವರೆಗೆ ಒಕ್ಕೂಟದ ವತಿಯಿಂದ ಒಂದು ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದ್ದು ಒಟ್ಟಾರೆಯಾಗಿ ಲೀಟರ್ ಗೆ ಕಡಿಮೆ ಅಂದರೆ 40ರೂ ನೀಡುವ ವ್ಯವಸ್ಥೆ ಮಾಡುವ ಬಗ್ಗೆ ಸಭೆಗೆ ತಿಳಿಸಿ ಒಕ್ಕೂಟಕ್ಕೆ ಸದಸ್ಯರು ಹಾಲನ್ನು ಉತ್ಪಾದಿಸಿ ನೀಡಿ ಒಕ್ಕೂಟವನ್ನು ಸ್ವಾವಲಂಬಿ ಒಕ್ಕೂಟವಾಗಿಸಲು ಕರೆ ನೀಡಿದರು. 

ಮುಖ್ಯ ಅಭ್ಯಾಗತಾರಾಗಿ  ದ.ಕ ಹಾಲು. ಉತ್ಪಾದಕರ ಒಕ್ಕೂಟ ನಿರ್ದೇಶಕ  ಶಿವಮೂರ್ತಿ.ಕೆ,ಕೋಟ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಎಚ್.ನಾಗರಾಜ್ ಹಂದೆ, ದ. ಕ. ಹಾ. ಉತ್ಪಾದಕರ ಒಕ್ಕೂಟ ವ್ಯವಸ್ಥಾಪಕ ರವಿರಾಜ್ ಉಡುಪ ,ಉಪ ವ್ಯವಸ್ಥಾಪಕರಾದ ಮಾಧವ ಐತಾಳ್ ,ಶಂಕರ ನಾಯ್ಕ್, ಕೋಟ ಸಿ ಎ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಣಧಿಕಾರಿ ಶರತ್ ಕುಮಾರ್ ಶೆಟ್ಟಿ ವಿಸ್ತರಣಾಧಿಕಾರಿ ಪ್ರತಿಭಾ ಉಪಸ್ಥಿತರಿದ್ದರು. ವಿವಿಧ ವ್ಯಾಪ್ತಿಯ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಈ ಕಾರ್ಯಾಗಾರದಲ್ಲಿ ಭಾಗಿಯಾದರು.

ಒಕ್ಕೂಟದ ವಿಸ್ತರಣಾಧಿಕಾರಿ ಉಮೇಶ್ ಕುಂದರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Exit mobile version