Kundapra.com ಕುಂದಾಪ್ರ ಡಾಟ್ ಕಾಂ

ಬೆಳಿಗ್ಗೆ 7 ರಿಂದ ಸಂಜೆ 7: ಉಡುಪಿ ಜಿಲ್ಲೆಯಲ್ಲಿ ಅಗತ್ಯ ವಸ್ತು ಖರೀದಿ ಸಮಯ ಬದಲಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯ ಬಳಿಕ ಅಗತ್ಯ ವಸ್ತುಗಳ ಖರೀದಿಗಿದ್ದ ಸಮಯವನ್ನು ವಿಸ್ತರಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಸರಕಾರ ಸೂಚಿಸಿರುವ ಎಲ್ಲಾ ಅಂಗಡಿಗಳು ತೆರೆದಿರಲಿವೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಲಾಕ್‌ಡೌನ್ ಆರಂಭದಿಂದ ಬೆಳಿಗ್ಗೆ 7ರಿಂದ 11ರ ತನವಿದ್ದ ಅಗತ್ಯ ವಸ್ತುಗಳ ಖದೀದಿ ಸಮಯವನ್ನು ನಿನ್ನೆಯ ಆದೇಶದಲ್ಲಿ ಮಧ್ಯಾಹ್ನ 1ರ ತನಕ ವಿಸ್ತರಿಸಲಾಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಜನದಟ್ಟಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕಷ್ಟವಾಗುತ್ತಿದ್ದುದರಿಂದ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ವಿಸ್ತರಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ/

ಬೆಳಿಗ್ಗೆ 9ರಿಂದ ಸಂಜೆ 7ರ ತನಕ ಮಧ್ಯದಂಗಡಿ ಓಪನ್:
ಇನ್ನು ಮದ್ಯದ ಅಂಗಡಿಗಳು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ತನಕ ತೆರೆದಿರಲಿವೆ. ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ತನಕ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ಎಲ್ಲಾ ಅಗತ್ಯ ವಸ್ತುಗಳು ಹಾಗೂ ಮದ್ಯದ ಅಂಗಡಿಗಳ ಮುಂದೆ ಆರು ಅಡಿ ಅಂತರದಲ್ಲಿ ಮಾರ್ಕ್ ಹಾಕುವುದು ಮತ್ತು ಸಿಬ್ಬಂದಿಗಳು ಮಾಸ್ಕ್ ಧರಿಸಿ ವ್ಯವಹಾರ ನಡೆಸುವುದು ಕಡ್ಡಾಯವಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಹೊರ ಜಿಲ್ಲೆ ಸಂಚಾರಕ್ಕಿಲ್ಲ ಅನುಮತಿ.ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .
► ಹೊರ ರಾಜ್ಯದಿಂದ ಬಂದಲ್ಲಿ ಸರ್ಕಾರಿ ಕ್ವಾರಂಟೈನ್ ಕಡ್ಡಾಯ. ಅಗತ್ಯ ವಸ್ತು ಖರೀದಿ ಸಮಯ ವಿಸ್ತರಣೆ – https://kundapraa.com/?p=37292 .
► ಇ-ಪಾಸ್ ಮೂಲಕ ಮಾತ್ರ ಪಾಸ್‌ಗಳ ವಿತರಣೆ, ತಹಶೀಲ್ದಾರ್ ಮೂಲಕ ದಾಖಲೆ ಸಲ್ಲಿಸಿದರೆ, ಪರಿಶೀಲಿಸಿ ಅನುಮೋದನೆ – https://kundapraa.com/?p=37298 .
► ಉಡುಪಿ ಜಿಲ್ಲೆ: ಕಟ್ಟಡ ನಿರ್ಮಾಣ, ಅಂಗಡಿ, ಕೈಗಾರಿಕೆ ತೆರೆಯಲು ಗೊಂದಲಗಳಿದ್ದಲ್ಲಿ ಸಂಪರ್ಕಿಸಿ – https://kundapraa.com/?p=37251 .

► ಷರತ್ತುಗಳಿಗೆ ಒಳಪಟ್ಟು ಅಂಗಡಿ ತೆರೆಯಲು ಅನುಮತಿ: ಜಿಲ್ಲಾಧಿಕಾರಿ ಜಿ. ಜಗದೀಶ್ . – https://kundapraa.com/?p=37339 .

Exit mobile version