Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಡಲಮಕ್ಕಳು ರೋಡಿಗಿಳಿಯುವ ಸಂದರ್ಭ ತರಬೇಡಿ. ಸರಕಾರ ಸ್ಪಂದಿಸದಿದ್ದರೇ ಉಗ್ರ ಹೋರಾಟ – ಪ್ರತಿಭಟನೆಯಲ್ಲಿ ಉಪ್ಪುಂದ ಮೀನುಗಾರರ ಎಚ್ಚರಿಕೆ
    ಊರ್ಮನೆ ಸಮಾಚಾರ

    ಕಡಲಮಕ್ಕಳು ರೋಡಿಗಿಳಿಯುವ ಸಂದರ್ಭ ತರಬೇಡಿ. ಸರಕಾರ ಸ್ಪಂದಿಸದಿದ್ದರೇ ಉಗ್ರ ಹೋರಾಟ – ಪ್ರತಿಭಟನೆಯಲ್ಲಿ ಉಪ್ಪುಂದ ಮೀನುಗಾರರ ಎಚ್ಚರಿಕೆ

    Updated:05/08/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ
    ,ಅ.05: ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರರರು ಸಾಕಷ್ಟು ನಷ್ಟ ಅನುಭವಿಸಿದ್ದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಮೀನುಗಾರರ ಸಂಕಷ್ಟ ತಿಳಿಯುವ ಕೆಲಸ ಮಾಡಿಲ್ಲ. ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿಭಾರಿಯೂ ಮೀನುಗಾರರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ನಮ್ಮ ಬದುಕಿಗೆ ಅಷ್ಟೂ ಕೂಡ ಕಿಮ್ಮತ್ತಿಲ್ಲವೇ ಎಂದು ಮೀನುಗಾರ ಮುಖಂಡ ಎಸ್. ಮದನಕುಮಾರ್ ಉಪ್ಪುಂದ ಪ್ರಶ್ನಿಸಿದ್ದಾರೆ.

    Click Here

    Call us

    Click Here

    ಅಗಸ್ಟ್ 2ರಂದು ಶಿರೂರು ಭಾಗದಲ್ಲಿ ನಡೆದ ಜಲಸ್ಪೋಟದಂತಹ ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರರು ಸಾಕಷ್ಟು ನಷ್ಟ ಅನುಭವಿದ ಸಂದರ್ಭ ಅವರಿಗೆ ಸ್ಪಂದಿಸದೇ ಮೀನುಗಾರ ಸಮುದಾಯವನ್ನು ಕಡೆಗಣಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರಕಾರದ ನಡೆಯನ್ನು ಖಂಡಿಸಿ ಉಪ್ಪುಂದ ಭಾಗದ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಕಡಲ ಮಕ್ಕಳನ್ನು ರೋಡಿಗೆ ಬರಲು ಬಿಡಬೇಡಿ. ನಾವು ರೋಡಿಗಿಳಿದಾಗ ಏನೇನು ಆಗಿದೆ ಎಂದು ಚರಿತ್ರೆಯನ್ನು ತಿರುಗಿ ನೋಡಿ. ನಮ್ಮ ಹಕ್ಕು ಹಾಗೂ ಬೇಡಿಕೆಗಳಿಗಾಗಿ ಪದೇ ರೋಡಿಗೆ ಬಂದು ನಿಲ್ಲುವ ಸನ್ನಿವೇಶ ಸೃಷ್ಠಿಯಾಗೋದು ಬೇಡ. ಭೋರ್ಗೆರವ ಸಮುದ್ರ, ಆಳೆತ್ತರದ ಅಲೆಗಳ ನಡುವೆ ದಿನವೂ ಸೆಣಸಾಡುವ ಮೀನುಗಾರ ಕಡಲಿಗೆ ಹೆದರದಿರುವಾಗ ಬೇರೆ ಯಾರಿಗೆ ಹೆದರುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು. ಮೀನುಗಾರರು ಅಸಾಹಯಕರಾಗಿ ಅಂಗಲಾಚುತ್ತಿದ್ದಾರೆ ಎಂದುಕೊಳ್ಳುವುದು ಬೇಡ ಎಂದು ಎಚ್ಚರಿಸಿದರು.

    ಮೀನುಗಾರರು ವೈಯಕ್ತಿಯವಾಗಿ ಬೇರೆ ಬೇರೆ ಪಕ್ಷ, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೀನುಗಾರರ ಸಮಸ್ಯೆ ಎಂದು ಬಂದಾಗ ಎಲ್ಲವನ್ನೂ ಮೀರಿ ಒಗ್ಗಟ್ಟಾಗುತ್ತೇವೆ. ನಮ್ಮ ಸಹನೆಯನ್ನು ಪರೀಕ್ಷಿಸುವ ಕೆಲಸ ಯಾರೋಬ್ಬರೂ ಮಾಡುವುದು ಬೇಡ. ಜಿಲ್ಲೆಯಲ್ಲಿ ಮೀನುಗಾರರು ಅಷ್ಟೇ ಅಲ್ಲದೇ ಮೀನುಗಾರೇತರರು ಸಾವಿರಾರು ಸಂಖ್ಯೆಯಲ್ಲಿ ಇದೇ ಉದ್ಯಮವನ್ನು ಅವಲಂಬಿಸಿಕೊಂಡಿದ್ದಾರೆ. ಶಿರೂರು ಭಾಗದಲ್ಲಿ ನಡೆದ ನಷ್ಟಕ್ಕೆ ಸರಿಯಾದ ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದರೇ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ಶಿರೂರು ಘಟನೆ ಮೀನುಗಾರರಿಗೆ ಕರಾಳ ದಿನ:
    ಶಿರೂರಿನಲ್ಲಿ ಜಲಸ್ಫೋಟದಿಂದಾಗಿ ಮೀನುಗಾರ 40ಕ್ಕೂ ಮಿಕ್ಕಿ ದೋಣಿ ಹಾಗೂ ಮೀನುಗಾರಿಕಾ ಸೊತ್ತುಗಳು ಹಾನಿಯಾಗಿದ್ದು 3 ಕೋಟಿಗೂ ಅಧಿಕ ನಷ್ಟವಾಗಿದೆ. ಇಷ್ಟು ದೊಡ್ಡ ಅವಘಡ ನಡೆದರೂ ಮೀನುಗಾರಿಕೆಯ ಸಹಾಯಕ ನಿರ್ದೇಶಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಶಾಸಕರು, ಸಂಸದರು, ಸಚಿವರು ಯಾರೂ ಕೂಡ ಭೇಟಿ ನೀಡಿ ಸಾಂತ್ವಾನದ ಮಾತುಗಳನ್ನೂ ಹೇಳಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

    Click here

    Click here

    Click here

    Call us

    Call us

    ಮೀನುಗಾರ ಮುಖಂಡರಾದ ವೆಂಕಟರಣ ಖಾರ್ವಿ ಮಾತನಾಡಿ ಮೀನುಗಾರರ ಸಮಸ್ಯೆ ಅರಣ್ಯರೋಧನವಾಗುತ್ತಿದೆ. ಪ್ರತಿಭಾರಿಯೂ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ ಸೇರಿ ಭರವಸೆ ನೀಡುತ್ತಿದ್ದಾರೆ ಹೊರತು ಸಮಸ್ಯೆ ಪರಿಹಾರದ ಬಗ್ಗೆ ಯೋಚಿಸುತ್ತಿಲ್ಲ. ಭಾರಿ ನಷ್ಟ ಉಂಟಾದ ಸಂದರ್ಭದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ನೂರಾರು ಕಾನೂನು ತೊಡಕುಗಳನ್ನು ತಂದಿಟ್ಟು ಪರಿಹಾರ ಸಿಗದಂತೆ ಮಾಡಿದ ಸಂದರ್ಭವೂ ಇದೆ. ಶಿರೂರು ಘಟನೆಯ ಸಂದರ್ಭದಲ್ಲಿ ಯಾರೋಬ್ಬರೂ ಸ್ಪಂದಿಸಿಲ್ಲ. ಪಕ್ಕದ ಭಟ್ಕಳಕ್ಕೆ ಬರುವ ಮುಖ್ಯಮಂತ್ರಿಗಳು, ಶಿರೂರು ಭಾಗದಲ್ಲಿ ಆದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ. ಮೀನುಗಾರರನ್ನು ಇಷ್ಟು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬೈಂದೂರು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ ಕಂದಾಯ ಇಲಾಖೆಯಿಂದ ಸಾಧ್ಯವಿರುವಷ್ಟು ನಷ್ಟ ಭರಿಸಲು ಕ್ರಮಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

    ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರಾದ ಜಗನ್ನಾಥ, ಕುಮಾರ ಖಾರ್ವಿ, ನಾಗರಾಜ ಖಾರ್ವಿ, ಕೆ. ನಾಗೇಶ್ ಖಾರ್ವಿ, ಬಿ. ದಾಮೋದರ ಖಾರ್ವಿ, ಬಿ. ಭಾಸ್ಕರ ಖಾರ್ವಿ, ತಿಮ್ಮಪ್ಪ ಖಾರ್ವಿ, ಡಿ. ರಾಮಚಂದ್ರ ಖಾರ್ವಿ, ನಾಗೇಶ ಖಾರ್ವಿ ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಮೀನುಗಾರರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸಾಲಿಗ್ರಾಮ: ಆಟೋ ರಿಕ್ಷಾ ಪಲ್ಟಿ ಹೊಡೆದು ಚಾಲಕ ಮೃತ

    24/12/2025

    ಬ್ರಹ್ಮಾವರ: ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ

    24/12/2025

    ಕೃಷಿಕರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿದಾಗ ಕೃಷಿ ಬೆಳವಣಿಗೆ ಸಾಧ್ಯ: ಗುರುರಾಜ್ ಗಂಟಿಹೊಳೆ

    24/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಸಾಲಿಗ್ರಾಮ: ಆಟೋ ರಿಕ್ಷಾ ಪಲ್ಟಿ ಹೊಡೆದು ಚಾಲಕ ಮೃತ
    • ಬ್ರಹ್ಮಾವರ: ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ
    • ಕೃಷಿಕರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿದಾಗ ಕೃಷಿ ಬೆಳವಣಿಗೆ ಸಾಧ್ಯ: ಗುರುರಾಜ್ ಗಂಟಿಹೊಳೆ
    • ಪೋನ್‌ನಲ್ಲಿ ಮಾತನಾಡುತ್ತಿರುವಾಗ ಆಯತಪ್ಪಿ ಟೆರೇಸ್‌ನಿಂದ ಬಿದ್ದು ಕಾರ್ಮಿಕ ಸಾವು
    • ವಲಯ ಮಟ್ಟದ ಪ್ರತಿಭಾ ಕಾರಂಜಿ: ಜನತಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.